‘ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರಿಗೆ ಮೊದಲೇ ಈ ಪ್ರಕರಣದ ಮಾಹಿತಿ ಇತ್ತು’ ಎಂಬ ಜೆಡಿಎಸ್ ನಾಯಕರ ಆರೋಪಗಳ ಕುರಿತು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಹಾಸನದ ಬಿಜೆಪಿ ನಾಯಕ ದೇವರಾಜೇಗೌಡ ಈ ಬಗ್ಗೆ ಅವರ ಪಕ್ಷದ ನಾಯಕರಿಗೆ ಪತ್ರ ಬರೆದಿದ್ದರು. ಪ್ರಧಾನಿ, ಅವರ ಸಚಿವಾಲಯ, ದೇವೇಗೌಡರ ಕುಟುಂಬಕ್ಕೆ ಎಲ್ಲವೂ ಗೊತ್ತಿತ್ತು. ಆದರೂ ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ಅವರನ್ನು ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಕನ್ನಡಿಗರು ಮತ್ತು ಹಾಸನ ಜಿಲ್ಲೆಯ ಮಾನ ಕಳೆದರು’ ಎಂದರು.