ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂತಾಪ ಸೂಚಿಸಿದ ನಟಿ ಆಲಿಯಾ ಭಟ್, ಕರಣ್ ಜೋಹರ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಟ್ವೀಟ್ಗಳಿಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸುಶಾಂತ್ ಸಿಂಗ್ ರಜಪೂತ್ ಒಂದು ಕಾಲದಲ್ಲಿ ಟಿವಿ ನಟನಾಗಿದ್ದ ಎಂಬ ಕಾರಣಕ್ಕೆ ಆಲಿಯಾ ಸೇರಿದಂತೆ ಹಲವರು ಆತನನ್ನು ತುಚ್ಛವಾಗಿ ಕಂಡಿದ್ದರು. ಆದರೆ, ಆತ ಸಾವಿಗೀಡಾಗಿರುವ ಈ ಸಂದರ್ಭದಲ್ಲಿ ಅವರ ಸಂತಾಪವನ್ನು ಕಂಡರೆ ಅಸಹ್ಯವೆನಿಸುತ್ತದೆ,’ ಎಂದು ಟ್ವಿಟರಿಗರು ಕಿಡಿ ಕಾರಿದ್ದಾರೆ.
ಇಷ್ಟೇ ಅಲ್ಲ, ಟ್ವಿಟರ್ನಲ್ಲಿ ಆಲಿಯಾ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು, #Alia ಎಂಬ ಹ್ಯಾಷ್ ಟ್ಯಾಗ್ ಸೋಮವಾರ ಬೆಳಗ್ಗೆ ಟ್ವಿಟರ್ನಲ್ಲಿ ಟ್ರೆಂಡ್ ಕೂಡ ಆಗಿತ್ತು.
ಆಲಿಯಾ, ಜೋಹರ್ ಸಂತಾಪ
I’m in a deep state of shock.
— Alia Bhatt (@aliaa08) June 14, 2020
No matter how much I think about it, I don’t have the words.
I’m totally devastated.
You've left us too soon.
You will be missed by each and every one of us.
My deepest condolences to Sushant's family, loved ones, and his fans. 🙏
This is heartbreaking....I have such strong memories of the times we have shared ...I can’t believe this ....Rest in peace my friend...when the shock subsides only the best memories will remain....💔 pic.twitter.com/H5XJtyL3FL
— Karan Johar (@karanjohar) June 14, 2020
ನೆಟ್ಟಿಗರ ಆಕ್ರೋಶ
Honestly speaking, reading the so-called’ condolences of Karan Johar, Alia Bhatt, Deepika Padukone and Ranveer Singh just boils my blood to to an extent that I can’t express. Alia, who made fun of him earlier, DEepika and Ranveer not inviting them to their wedding
— Kashmeera Murthy (@Kashmeerawrites) June 14, 2020
‘ಪ್ರಾಮಾಣಿಕವಾಗಿ ಹೇಳುವುದಾದರೆ, ಕರಣ್ ಜೊಹರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಸಂತಾಪವನ್ನು ಓದಿ ನನ್ನ ರಕ್ತ ಇನ್ನಿಲ್ಲದಂತೆ ಕುದಿಯುತ್ತಿದೆ. ಸುಶಾಂತ್ ಅವರನ್ನು ಆಲಿಯಾ ಈ ಮೊದಲು ಗೇಲಿ ಮಾಡಿದ್ದರು. ದೀಪಿಕಾ ಮತ್ತು ರಣವೀರ್ ತಮ್ಮ ಮದುವೆಗೆ ಸುಶಾಂತ್ ಅವರನ್ನು ಕರೆದಿರಲೇ ಇಲ್ಲ,’ ಎಂದು ಕಶ್ಮೀರಾ ಮೂರ್ತಿ ಎಂಬುವವರು ಕಿಡಿ ಕಾರಿದ್ದಾರೆ.
Hey everyone, we got a hypocrite here. He and alia mocked him for being a TV actor. Alia is a symbol of nepotism and Karan the promoter. Bollywood is filled with selfish people who care for others only after they die. Glad i have stopped watching their movies.#SushantSingh pic.twitter.com/7KK7ZlzfuQ
— Aman Shrivastav (@A_M_A_N_26) June 14, 2020
‘ನಮಗೊಬ್ಬ ಕಪಟಿ ಸಿಕ್ಕಿಬಿದ್ದಿದ್ದಾನೆ. ಆತ (ಕರಣ್ ಜೋಹರ್) ಮತ್ತು ಆಲಿಯಾ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಟಿವಿ ನಟ ಎಂದು ಅಪಹಾಸ್ಯ ಮಾಡಿದ್ದರು. ಆಲಿಯಾ ಸ್ವಜನಪಕ್ಷಪಾತದ ಸಂಕೇತ, ಕರಣ್ ಅದರ ಪ್ರಚಾರಕ. ಬಾಲಿವುಡ್ ಸ್ವಾರ್ಥಿಗಳಿಂದ ತುಂಬಿದೆ. ಜನ ಸತ್ತ ಮೇಲೆ ಮಾತ್ರ ಅವರನ್ನು ಇಂಥವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಇಂಥವರ ಚಿತ್ರಗಳನ್ನು ನಾನು ನೋಡುವುದನ್ನೇ ಬಿಟ್ಟಿದ್ದೇನೆ,’ ಎಂದು ಅಮನ್ ಶ್ರೀವಾತ್ಸವ ಎಂಬುವವರು ಟ್ವೀಟ್ ಮಾಡಿದ್ದಾರೆ.
ಏನು ಹೇಳಿದ್ದರು ಆಲಿಯಾ?
ಕರಣ್ ಜೊಹರ್ ಅವರ ಜನಪ್ರಿಯಾ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ‘ಈ ಮೂರು ಸೆಲೆಬ್ರೆಟಿಗಳಲ್ಲಿ ಅತಿ ಹೆಚ್ಚು ಮಾದಕವಾಗಿರುವವರನ್ನು ತಿಳಿಸಿ,’ ಎಂದು ಜೊಹರ್ ಮೂರು ಹೆಸರುಗಳನ್ನು ಆಲಿಯಾ ಮುಂದಿಟ್ಟಿದ್ದರು. ರಣವೀರ್ ಸಿಂಗ್, ಸುಶಾಂತ್ ಸಿಂಗ್ ರಜಪೂತ್ ಮತ್ತು ವರುಣ್ ಧವನ್ ಆ ಮೂರು ಹೆಸರುಗಳಾಗಿದ್ದವು. ಇದಕ್ಕೆ ಉತ್ತರಿಸಿದ್ದ ಆಲಿಯಾ, ‘ಯಾರು ಸುಶಾಂತ್ ಸಿಂಗ್ ರಜಪೂತ್’ ಎಂದು ಪ್ರಶ್ನೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.