ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ‘ಯಾರಲ್ಲಿ ಒಳ್ಳೆಯ ಕವಿತೆ, ಕಾವ್ಯದ ಗುಣ ಇರುತ್ತದೆಯೋ ಅವರು ಮಾತ್ರ ಉಳಿಯುತ್ತಾರೆ. ಹಾಗೆ ಉಳಿದವರಲ್ಲಿ ಅಕ್ಕಮಹಾದೇವಿ ಪ್ರಮುಖರು. ಅವರು ಸತ್ವಯುತವಾಗಿ ಬರೆದಿದ್ದರಿಂದ ಕಾಲ, ದೇಶವನ್ನು ಮೀರಿದ್ದಾರೆ. ಕಾವ್ಯಮೀಮಾಂಸೆ ಇಲ್ಲದ ಸಂದರ್ಭದಲ್ಲಿ ಬಸವಾದಿ ಶರಣರು ವಚನ ರಚಿಸಿ, ಹಾಡಿದರು. ಇತ್ತೀಚೆಗೆ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡುತ್ತೇವೆ. ಆದರೆ, ಹನ್ನೆರಡನೆ ಶತಮಾನದಲ್ಲಿ ಯಾವುದೇ ಕಾವ್ಯ ಗುರುವನ್ನೂ ಹೊಂದದೆ ಉತ್ಕೃಷ್ಟ ಸಾಹಿತ್ಯ ಸೃಷ್ಟಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.