ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ಉದಯ್ ಕೃಷ್ಣ ಮತ್ತು ನಿಯತಿ ಅವರು ರಚಿಸಿರುವ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ಚಂದ್ರ ಬೋಸ್, ಕುವೆಂಪು, ದ.ರಾ. ಬೇಂದ್ರೆ, ಶಿವರಾಂ ಕಾರಂತ, ಅಟಲ್ ಬಿಹಾರಿ ವಾಜಪೇಯಿ, ಲತಾ ಮಂಗೇಷ್ಕರ್, ಪುನೀತ್ ರಾಜ್ಕುಮಾರ್, ಅಮಿತಾಭ್ ಬಚ್ಚನ್, ರೋಜರ್ ಫೆಡರರ್, ಕಪಿಲ್ ದೇವ್, ವೀರೇಂದ್ರ ಹೆಗ್ಗಡೆ ಸೇರಿದಂತೆ ಅನೇಕರ ಕಲಾಕೃತಿಗಳು ಕಲಾಪ್ರೇಮಿಗಳ ಕೈಬೀಸಿ ಕರೆಯುತ್ತಿವೆ. ಮತ್ತೊಂದಡೆ ವೈವಿಧ್ಯಮಯ ಛಾಯಾಚಿತ್ರಗಳು ಹಾಗೂ ವನ್ಯಜೀವಿಗಳ ಛಾಯಾಚಿತ್ರಗಳು ನೋಡುಗರ ಗಮನ ಸೆಳೆಯುತ್ತಿವೆ.