ವಿಶ್ವಕಪ್ಗೆ ಆಯ್ಕೆ ಮಾಡಿರುವ ತಂಡದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿರುವ ಅವರು, 17 ವರ್ಷದ ಬಳಿಕ ಭಾರತ ಟ್ರೋಫಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಉತ್ತಮ ತಂಡವನ್ನೇ ಆಯ್ಕೆ ಮಾಡಲಾಗಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗವೂ ಗಟ್ಟಿಯಾಗಿದೆ. ಸದ್ಯ ವಿಶ್ವದಲ್ಲೇ ಬೂಮ್ರಾ ಉತ್ಯುತ್ತಮ ಬೌಲರ್. ಅನುಭವಿ ಕುಲದೀಪ್, ಅಕ್ಷರ್, ಸಿರಾಜ್ ಇದ್ದಾರೆ. ಇದೊಂದು ಉತ್ತಮ ಸಂಯೋಜಿತ ತಂಡ’ ಎಂದು ಗಂಗೂಲಿ ಹೇಳಿದ್ದಾರೆ.