ನಾವು ಪ್ರತಿದಿನ ಶ್ರೀರಾಮನ ದರ್ಶನ ಪಡೆಯುತ್ತೇವೆ. ಅಯೋಧ್ಯೆಯಲ್ಲಿ ಈಗ ನಿರ್ಮಿಸಿರುವ ರಾಮಮಂದಿರ ವಾಸ್ತು ಪ್ರಕಾರ ಇಲ್ಲ. ಹಳೆಯ ದೇವಾಲಯಗಳನ್ನೊಮ್ಮೆ ನೋಡಿ. ಯಾವುದೇ ದೇವಾಲಯಗಳು ಈ ರೀತಿ ಇಲ್ಲ. ರಾಮಮಂದಿರ ಈಗ ಉಪಯೋಗಕ್ಕಿಲ್ಲದಂತಾಗಿದೆ
-ರಾಮ್ಗೋಪಾಲ್ ಯಾದವ್, ಸಮಾಜವಾದಿ ಪಕ್ಷದ ಮುಖಂಡ
ರಾಮ್ಗೋಪಾಲ್ ಯಾದವ್ ಅವರು ರಾಮ ಮಂದಿರದ ಕುರಿತು ನೀಡಿರುವ ಹೇಳಿಕೆಯು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೇರಿರುವ ‘ಇಂಡಿಯಾ’ ಒಕ್ಕೂಟದ ವಾಸ್ತವವನ್ನು ಬಿಚ್ಚಿಟ್ಟಿದೆ. ಅವರು ಕೇವಲ ದೇಶದ ಜನರ ನಂಬಿಕೆಯ ಜೊತೆಗಷ್ಟೇ ಆಟವಾಡುತ್ತಿಲ್ಲ. ಶ್ರೀರಾಮನ ಅಸ್ತಿತ್ವದ ಕುರಿತೂ ಸವಾಲು ಹಾಕುತ್ತಿದ್ದಾರೆ. ದೇವರ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದವರು ದುರ್ಗತಿ ಕಂಡಿರುವುದನ್ನು ಇತಿಹಾಸದಲ್ಲಿ ಗಮನಿಸಬಹುದಾಗಿದೆ