ದಿನ ಭವಿಷ್ಯ: ಮನೆಯ ಹೊರಗಿನ ಆಹಾರ ಸೇವನೆ ಬೇಡ
Published 27 ಏಪ್ರಿಲ್ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಣ್ಣ ವಿಷಯಗಳಿಗೆ ಕೋಪಿಸಿಕೊಳ್ಳುವ ನಿಮ್ಮ ಪ್ರವೃತ್ತಿಯಿಂದಾಗಿ ನೀವು ಹಿರಿಯರ ಕೋಪಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಅರ್ಥಶಾಸ್ತ್ರಜ್ಞರಿಗೆ ನಿಮ್ಮ ಹಿಂದಿನ ಸಾಧನೆಗಳನ್ನು ಗುರುತಿಸಿ ಸರ್ಕಾರದಿಂದ ಕರೆ ಬರಲಿದೆ.
27 ಏಪ್ರಿಲ್ 2024, 19:30 IST
ವೃಷಭ
ಮಾರ್ಗಮಧ್ಯದಲ್ಲಿ ಎದುರಾದ ಸಮಸ್ಯೆಯನ್ನು ಪರಿಹರಿಸಲು ಬಾಲ್ಯದ ಸ್ನೇಹಿತನ ಸಹಾಯ ಕೇಳಿದರೆ ಪರಿಹಾರವಾಗುವುದು. ಯಾವ ಯೋಚನೆ ಮಾಡದೆ ಶ್ರೀ ವಿಷ್ಣು ಸಹಸ್ರನಾಮ ಪಠಣ ಮಾಡಿ, ಶುಭವಾಗುವುದು.
27 ಏಪ್ರಿಲ್ 2024, 19:30 IST
ಮಿಥುನ
ತಂತ್ರಜ್ಞಾನದ ಈ ಕಾಲದಲ್ಲಿ ನಿಮ್ಮ ಅಳಿವಿನಂಚಿನಲ್ಲಿರುವ ವಿದ್ಯೆಗೆ ಬೆಲೆ ಇಲ್ಲವೆಂದು ನೀವು ತಿಳಿದಿದ್ದಲ್ಲಿ ನಿಮ್ಮ ನಂಬಿಕೆ ಹುಸಿಯಾಗುವ ಹಾಗೆ ನಿಮ್ಮನ್ನರಸಿ ಅವಕಾಶಗಳು ಬರಲಿವೆ. ನಿಮ್ಮ ಗಮನವನ್ನು ಒಂದೇ ಕಡೆಗೆ ಕೇಂದ್ರೀಕರಿಸಿ.
27 ಏಪ್ರಿಲ್ 2024, 19:30 IST
ಕರ್ಕಾಟಕ
ಕೋಟಿಗಟ್ಟಲೆ ವ್ಯವಹಾರ ನಡೆಸುವವರು ಮನೆಯ ಕಾರ್ಯಕ್ರಮದಲ್ಲಿ ಕೃಪಣತೆ ತೋರಿಸುವುದು ಬೇಡ. ದೃಷ್ಟಿ ದೋಷಕ್ಕೆ ಸೂಕ್ತ ವೈದ್ಯರನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಿ. ಮೊಮ್ಮಕ್ಕಳು ಸಂತೋಷಕ್ಕೆ ಕಾರಣವಾಗಲಿದ್ದಾರೆ.
27 ಏಪ್ರಿಲ್ 2024, 19:30 IST
ಸಿಂಹ
ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಇತರರಿಗೆ ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿ ಕೊಳ್ಳುವುದು ಉತ್ತಮ. ಮನೆಯ ಹೊರಗಿನ ಆಹಾರ ಸೇವನೆ ಬೇಡ.
27 ಏಪ್ರಿಲ್ 2024, 19:30 IST
ಕನ್ಯಾ
ಅಣ್ಣ ತಂಗಿಯರ ನಡುವೆ ಸಂಬಂಧಗಳು ಗಟ್ಟಿಯಾಗುವಂಥ ವಿಶೇಷ ವಿಚಾರಗಳು ನಡೆಯುವ ಸಾಧ್ಯತೆಗಳಿವೆ. ಚಲನ ಚಿತ್ರರಂಗದವರಿಗೆ ಅಥವಾ ಅಭಿನಯಿಸುವ ಕಲಾವಿದರುಗಳಿಗೆ ಒಳ್ಳೆಯ ಖ್ಯಾತಿ ದೊರೆಯುವುದು.
27 ಏಪ್ರಿಲ್ 2024, 19:30 IST
ತುಲಾ
ಅತೀಂದ್ರಿಯ ಶಕ್ತಿಯೋ ಎಂಬಂತೆ ಇಂದು ನಿಮಗೆ ಅಪಾಯಗಳಾಗುವ ಸಂಭವವಿದ್ದಲ್ಲಿ ಅವುಗಳ ಮುನ್ಸೂಚನೆ ದೊರೆಯುತ್ತವೆ. ನಿಮ್ಮ ದೀರ್ಘಕಾಲಿಕ ಅನಾರೋಗ್ಯದ ಸಮಸ್ಯೆಗಳಿಗೆ ಮಗಳಿಂದ ಪರಿಹಾರದ ದಾರಿಗಳು ಕಾಣುತ್ತವೆ.
27 ಏಪ್ರಿಲ್ 2024, 19:30 IST
ವೃಶ್ಚಿಕ
ಅತಿಯಾದ ಔದರ್ಯತನ ತೋರಬೇಕೆನಿಸಿದಲ್ಲಿ ನಿಮ್ಮ ಹಣಕಾಸಿನ ಸ್ಥಿತಿಯನ್ನು ಒಮ್ಮೆ ಗಮನಿಸಿಕೊಳ್ಳುವುದು ಉತ್ತಮ. ಚಲಾವಣೆಯಲ್ಲಿಲ್ಲದ ರೀತಿ ನೀತಿಗಳನ್ನು ಪಾಲಿಸುತ್ತಿರುವವರನ್ನು ನೋಡಿ ಬೆರಗಾಗುವಿರಿ.
27 ಏಪ್ರಿಲ್ 2024, 19:30 IST
ಧನು
ನೀವು ಮೇಲಧಿಕಾರಿಗಳಿಗೆ ಸಲ್ಲಿಸಿದ ಅರ್ಜಿ ಇನ್ನೂ ಮುಂದುವರಿಯದೆ ಇರುವುದು ನಿಮ್ಮ ಮನಸ್ಸನ್ನು ಘಾಸಿಗೊಳಿಸಬಹುದು. ಬೆಂಕಿಯಿಂದ ಸಂಭವಿಸುವಂಥ ತೊಂದರೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ.
27 ಏಪ್ರಿಲ್ 2024, 19:30 IST
ಮಕರ
ಕಚೇರಿಯಲ್ಲಿ ತಪ್ಪು ತಿಳುವಳಿಕೆ ಅಥವಾ ಮಾತಿನ ಚಕಮಕಿಯಿಂದ ತಪ್ಪಿಸಿಕೊಳ್ಳಲು ನಿಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿ. ಷೇರು ಹೂಡಿಕೆದಾರರು ಉತ್ತಮವಾಗಿ ಪರಿಶೀಲಿಸಿದ ನಂತರವಷ್ಟೇ ಹೂಡಿಕೆಯನ್ನು ಮಾಡಿ.
27 ಏಪ್ರಿಲ್ 2024, 19:30 IST
ಕುಂಭ
ಕದಡಿದ ನಿಮ್ಮ ಮನಸ್ಸು ದೇವಸ್ಥಾನಗಳನ್ನು ಭೇಟಿ ಮಾಡುವ ನೆಪದಲ್ಲಿ ತಿಳಿಯಾಗುವುದು. ಸಹೋದರರ ಜೊತೆಗೆ ಮಾಡಿಕೊಂಡ ವ್ಯಾಜ್ಯವನ್ನು ಮೂರನೆ ವ್ಯಕ್ತಿಗಳು ಆಡಿಕೊಳ್ಳುವುದಕ್ಕಿಂತ ಮುಂಚೆ ಪರಿಹರಿಸಿಕೊಳ್ಳಿ.
27 ಏಪ್ರಿಲ್ 2024, 19:30 IST
ಮೀನ
ಆಯ್ಕೆ, ತೀರ್ಮಾನ ಮಾಡುವ ವಿಚಾರದಲ್ಲಿ ಮನಸ್ಸಿನ ಚಂಚಲ ಸ್ವಭಾವದಿಂದ ವಿಫಲರಾಗುವ ಸನ್ನಿವೇಶಗಳಿರುವುದು. ನೀವಾಡುವ ನಾಲ್ಕು ಒಳ್ಳೆಯ ಮಾತುಗಳು ಇಂದು ಒಬ್ಬರಿಗೆ ಸ್ಫೂರ್ತಿದಾಯಕವಾಗುವವು.
27 ಏಪ್ರಿಲ್ 2024, 19:30 IST