ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೂರಿನಲ್ಲಿ ನೀರಿನ ವ್ಯಾಪಾರ!

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಬನಶಂಕರಿ 3ನೇ ಹಂತದ ಪುಷ್ಪಗಿರಿ ನಗರದಲ್ಲಿ (ಕೆರೆ ಕೋಡಿ) ಕಾವೇರಿ ಜಲ ಸಂಪರ್ಕ ಇದ್ದರೂ ಅಸಮರ್ಪಕ ನೀರು ಪೂರೈಕೆಯಿಂದಾಗಿ ಬಹುಮಟ್ಟಿಗೆ ಇಲ್ಲಿನ ಎಲ್ಲ ಮನೆಗಳವರು ಒಂದೊಂದು ಕೊಳವೆ ಬಾವಿ ಹಾಕಿಸಿಕೊಂಡಿದ್ದಾರೆ. ಈ ಬಾರಿ ಬೇಸಿಗೆಯ ತೀವ್ರತೆಯಿಂದಾಗಿ ಬಹಳಷ್ಟು ಕೊಳವೆಗಳು ಬತ್ತಿಹೋಗಿವೆ.

ಆದರೆ ಇಂಥ ಪರಿಸ್ಥಿತಿಯಲ್ಲಿ ಜಲಮಂಡಲಿಯು ಖಾಸಗಿಯವರೊಬ್ಬರಿಗೆ ಕೊಳವೆ ಬಾವಿಯ ನೀರನ್ನು ತೆಗೆದು ವಾಟರ್‌ ಟ್ಯಾಂಕ್‌ಗಳಲ್ಲಿ ಸಾಗಿಸುವ ವ್ಯಾಪಾರಕ್ಕೆ ಅನುಮತಿ ನೀಡಿರುವುದರಿಂದ ಅಷ್ಟಿಷ್ಟು ನೀರು ಸಿಗುತ್ತಿದ್ದ ಕೊಳವೆ ಬಾವಿ ಮಾಲೀಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜನವಸತಿ ಪ್ರದೇಶದಲ್ಲಿ ನೀರಿನ ವ್ಯಾಪಾರಕ್ಕೆ ಅನುಮತಿ ನೀಡುವ ಜಲಮಂಡಲಿಗೆ ಬುದ್ಧಿ ಇಲ್ಲವೆ? ಸಂಬಂಧಪಟ್ಟವರು ಕೂಡಲೇ ಈ ಗಂಭೀರ ಸಮಸ್ಯೆಗೆ ಸ್ಪಂದಿಸಬೇಕಾಗಿ ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT