‘ಕೇಜ್ರಿವಾಲ್ ಬಂಧನದ ವಿರುದ್ಧ ದೆಹಲಿಯಲ್ಲಿ ‘ಜೈಲ್ ಕಾ ಜವಾಬ್ ವೋಟ್ ಸೆ’ ಎಂಬ ಅಭಿಯಾನ ನಡೆಸುತ್ತಿದ್ದೇವೆ. ಅಲ್ಲದೇ ಸ್ಥಳದಲ್ಲಿ ವಾಷಿಂಗ್ ಮಿಷನ್ವೊಂದನ್ನು ಇರಿಸಿದ್ದು, ಯಾವುದೇ ಭ್ರಷ್ಟ ರಾಜಕಾರಣಿಯನ್ನು ಈ ಯಂತ್ರದಲ್ಲಿ ಹಾಕಿದರೂ ಅವರು ಪರಿಶುದ್ಧವಾಗಿ ಹೊರಬರುತ್ತಾರೆ’ ಎಂದು ವ್ಯಂಗ್ಯವಾಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ವಿಚಲಿತರಾಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ತಮ್ಮ ನಿಲುವನ್ನು ಬದಲಿಸಿರುವುದನ್ನು ನೋಡಿದರೆ ವಿರೋಧ ಪಕ್ಷಗಳು ಅಧಿಕಾರಕ್ಕೆ ಬರುವುದು ಖಚಿತವೆಂದು ಅವರಿಗೆ ಅನಿಸಿದೆ’ ಎಂದು ಹೇಳಿದರು.