ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೊಂದಿರುವ ಜನರ ನೆರವಿಗೆ ಏನೂ ಮಾಡದೆ, ತಪ್ಪು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಬರ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಪ್ರತಿ ಸಮಸ್ಯೆಗೂ ಕೇಂದ್ರವೇ ಕಾರಣ ಎನ್ನುವಂತಿದೆ ಕಾಂಗ್ರೆಸ್ ಧೋರಣೆ’ ಎಂದು ದೂರಿದರು.