ತೇರನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ರಥವನ್ನು ಮುಂದೆ ಎಳೆದರು. ರಥ ಮುಂದೆ ಸಾಗುತ್ತಿದಂತೆ ಭಕ್ತರು ತಮ್ಮ ಬಾಳೆಹಣ್ಣು ಎಸೆದು ಹರಕೆಗಳನ್ನು ತೀರಿಸಿದರು. ಜನಪದ ಕಲಾತಂಡಗಳಾದ ವೀರಗಾಸೆ, ನಂದಿಧ್ವಜ, ಕರಡಿ ವಾದ್ಯ, ಬೃಹತ್ ಗೊಂಬೆಗಳ ಕುಣಿತ ಮೆರುಗು ನೀಡಿದವು. ಸ್ಥಳೀಯರು ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಿದರು. ದೇವಾಲಯದ ಸಮಿತಿ ವತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.