ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಪತ್ರಕರ್ತರಿಗೆ ‘ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ’

Published 28 ಮಾರ್ಚ್ 2024, 16:02 IST
Last Updated 28 ಮಾರ್ಚ್ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ‘ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ’ಗಳನ್ನು ಗುರುವಾರ ಪ್ರಕಟಿಸಿದ್ದು, 25 ಪತ್ರಕರ್ತರು ಆಯ್ಕೆಯಾಗಿದ್ದಾರೆ. 

ಪ್ರಶಸ್ತಿಗಳು ತಲಾ ₹5 ಸಾವಿರ ನಗದು ಒಳಗೊಂಡಿವೆ. ‘ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ’ಗೆ ಮಂಗಳೂರಿನ ಬಿ.ಎಂ.ಬಶೀರ್, ‘ಗೊಮ್ಮಟ ಮಾಧ್ಯಮ ಪ್ರಶಸ್ತಿ’ಗೆ ಬೆಳಗಾವಿಯ ಕುಂತಿನಾಥ ಕಲಮನಿ, ‘ಡಿವಿಜಿ ಪ್ರಶಸ್ತಿ’ಗೆ ಬೆಂಗಳೂರಿನ ವಿ.ವೆಂಕಟೇಶ್, ‘ಸಿ.ಆರ್.ಕೃಷ್ಣರಾವ್ (ಸಿಆರ್‌ಕೆ) ಪ್ರಶಸ್ತಿ’ಗೆ ಬೆಂಗಳೂರಿನ ಸಿ.ಜಿ.ಮಂಜುಳ, ‘ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ’ಗೆ ಮೈಸೂರಿನ ಮಲ್ಲಿಗೆ ಮಾಚಮ್ಮ, ‘ಎಸ್.ವಿ.ಜಯಶೀಲರಾವ್ ಪ್ರಶಸ್ತಿ’ಗೆ ಹುಬ್ಬಳ್ಳಿಯ ಮೋಹನ ಹೆಗಡೆ, ‘ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ’ಗೆ ಸನತ್ ಕುಮಾರ್ ಬೆಳಗಲಿ, ‘ಕಿಡಿ ಶೇಷಪ್ಪ ಪ್ರಶಸ್ತಿ’ಗೆ ಹಾಸನದ ಬಿ.ಎಂ.ನಂದೀಶ್ ಆಯ್ಕೆಯಾಗಿದ್ದಾರೆ. 

‘ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ’ಗೆ ಬೆಂಗಳೂರಿನ ಆರ್.ಜಯಕುಮಾರ್, ‘ಪಿ.ಆರ್.ರಾಮಯ್ಯ ಪ್ರಶಸ್ತಿ’ಗೆ ಮೈಸೂರಿನ ಸಿ.ಕೆ.ಮಹೇಂದ್ರ, ‘ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ’ಗೆ ರಾಮನಗರದ ಅಶೋಕ್ ರಾಮ್, ‘ರಾಜಶೇಖರಕೋಟಿ ಪ್ರಶಸ್ತಿ’ಗೆ ಬಾಗಲಕೋಟೆಯ ಶಶಿಕುಮಾರ್ ಬಿ. ಕೆರೂರ, ‘ಪಿ.ರಾಮಯ್ಯ ಪ್ರಶಸ್ತಿ’ಗೆ ರಾಣೆಬೆನ್ನೂರಿನ ಮನೋಹರ ಮಲ್ಲಾಡದ, ‘ಮ.ರಾಮಮೂರ್ತಿ ಪ್ರಶಸ್ತಿ’ಗೆ ಬೆಂಗಳೂರಿನ ಎಚ್.ಕೆ.ಬಸವರಾಜು, ‘ಗರುಡನಗಿರಿ ನಾಗರಾಜ್ ಪ್ರಶಸ್ತಿ’ಗೆ ಬೆಂಗಳೂರಿನ ಪ್ರಭುಲಿಂಗ ಶಾಸ್ತ್ರಿಮಠ ಭಾಜನರಾಗಿದ್ದಾರೆ.

‘ಮಹದೇವ ಪ್ರಕಾಶ್ ಪ್ರಶಸ್ತಿ’ಗೆ ಕಲಬುರಗಿಯ ವಿಜಯಕುಮಾರ್ ವಾರದ, ‘ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ’ಗೆ ಭದ್ರಾವತಿಯ ಎನ್.ಬಾಬು, ‘ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ’ಗೆ ಯಾದಗಿರಿಯ ನಾಮದೇವ ವಾಟ್ಕರ್, ‘ಎಂ.ನಾಗೇಂದ್ರರಾವ್ ಪ್ರಶಸ್ತಿ’ಗೆ ದಾವಣಗೆರೆಯ ರವಿ ಆರ್., ‘ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ’ಗೆ ಕೋಲಾರದ ಕೆ.ಗೋಪಿಕಾ ಮಲ್ಲೇಶ್, ‘ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ’ಗೆ ಚಾಮರಾಜನಗರದ ಆರ್.ಸಿ.ಪುಟ್ಟರಾಜು ಆಯ್ಕೆಯಾಗಿದ್ದಾರೆ.

ವಿಶೇಷ ಪ್ರಶಸ್ತಿಗೆ ಚಿಕ್ಕಪ್ಪನಳ್ಳಿ ಷಣ್ಮುಖ, ಎಸ್.ಬಿ.ರವಿಕುಮಾರ್, ಶ.ಮಂಜುನಾಥ್ ಹಾಗೂ ರವಿ ಮಲ್ಲಾಪುರ ಭಾಜನರಾಗಿದ್ದಾರೆ. ಚಿತ್ರದುರ್ಗದಲ್ಲಿ ಏ.1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT