ಮಹಾರಾಷ್ಟ್ರದ ಕೋತಳಿ ಗ್ರಾಮದ ಶ್ರೀಹರಿ ಜಂಪಾವಾಡ ಅವರ ಮಗಳಾದ ಸುನೀತಾ ಅಲಿಯಾಸ್ ಚಿತ್ರಕಲಾ ಇವರಿಗೆ ಸೋನಾಳವಾಡಿ ಗ್ರಾಮದ ರಮೇಶ ಆನಂದರಾವ ಅವರೊಂದಿಗೆ ಒಂಬತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರು ಮಕ್ಕಳಾಗಿದ್ದರು. ರಮೇಶ, ತನ್ನ ಹೆಂಡತಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ. 2018ರ ಡಿಸೆಂಬರ್ 28ರಂದು ಹೆಂಡತಿಯೊಂದಿಗೆ ಜಗಳವಾಡಿ ಹೊಡೆದು, ಕುತ್ತಿಗೆ ಹಿಚುಕಿ ಕೊಲೆ ಮಾಡಿದ್ದಾನೆ ಎಂದು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿ ದಿಲೀಪ್ಕುಮಾರ ಬಿ. ಸಾಗರ ಅವರು ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.