ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಈಗ ಚಾರಣಿಗರ ಸ್ವರ್ಗ ಎನಿಸಿದೆ. ಕನ್ನಡನಾಡಿನ ಕಲಶಪ್ರಾಯ ಗುಡ್ಡಗಳಲ್ಲಿ ಒಂದಾಗಿರುವ ಕಪ್ಪತ್ತಗುಡ್ಡ ತನ್ನ ಸೌಂದರ್ಯದಿಂದ ಮಾತ್ರವಲ್ಲದೇ, ಅಪಾರ ಜೀವವೈವಿಧ್ಯ, ಖನಿಜ ಹಾಗೂ ಔಷಧೀಯ ಸಸ್ಯ ಸಂಪತ್ತಿನಿಂದಲೂ ಗಮನ ಸೆಳೆಯುತ್ತದೆ. ಕಪ್ಪತ್ತಗುಡ್ಡ ಗದಗ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಜೀವವಾಯುವನ್ನು ಉಣಿಸುವ ಅಮೃತದಾಯಿನಿಯೂ ಹೌದು.