ಯಡ್ರಾಮಿ: ತಾಲ್ಲೂಕಿನ ಜಮಖಂಡಿ ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಬಿಸಿಲಿನಿಂದ ಅಸ್ವಸ್ಥಗೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಶಹಾಪುರ ಪಟ್ಟಣದ ಗುತ್ತಿಪೇಟಾ ನಗರ ನಿವಾಸಿ ಬಸವರಾಜ ಮಲ್ಲಪ್ಪ ವಂದಲ್ಕರ್ (68) ಮೃತರು. ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ದೇವರು ಮಾಡಲು ಬಂದಾಗ ಕಳೆದುಕೊಂಡಿದ್ದರು. ಇತನು ಬುದ್ಧಿಮಾಂದ್ಯದಿಂದ ಹಾಗೂ ಆಗಾಗ ಕುಡಿದು ಮನೆ ಬಿಟ್ಟು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.
‘ಈ ಬಾರಿ ದಾರಿ ತಪ್ಪಿ ಜಮಖಂಡಿಗೆ ಬಂದಿದ್ದಾನೆ. ಬೇಸಿಗೆ ಬಿಸಿಲು ಹಾಗೂ ಝಳಕ್ಕೆ ಮರದ ಕೆಳಗೆ ಮಲಗಿದ್ದಾಗ ತಾಪಮಾನ ತಾಳಲಾರದೆ ಮೃತಪಟ್ಟಿರಬಹದು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.