ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ಬಿಸಿಲಿಗೆ ವ್ಯಕ್ತಿ ಸಾವು

Published 30 ಏಪ್ರಿಲ್ 2024, 20:26 IST
Last Updated 30 ಏಪ್ರಿಲ್ 2024, 20:26 IST
ಅಕ್ಷರ ಗಾತ್ರ

ಯಡ್ರಾಮಿ: ತಾಲ್ಲೂಕಿನ ಜಮಖಂಡಿ ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಬಿಸಿಲಿನಿಂದ ಅಸ್ವಸ್ಥಗೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಶಹಾಪುರ ಪಟ್ಟಣದ ಗುತ್ತಿಪೇಟಾ ನಗರ ನಿವಾಸಿ ಬಸವರಾಜ ಮಲ್ಲಪ್ಪ ವಂದಲ್ಕರ್ (68) ಮೃತರು. ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ದೇವರು ಮಾಡಲು ಬಂದಾಗ ಕಳೆದುಕೊಂಡಿದ್ದರು. ಇತನು ಬುದ್ಧಿಮಾಂದ್ಯದಿಂದ ಹಾಗೂ ಆಗಾಗ ಕುಡಿದು ಮನೆ ಬಿಟ್ಟು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.

‘ಈ ಬಾರಿ ದಾರಿ ತಪ್ಪಿ ಜಮಖಂಡಿಗೆ ಬಂದಿದ್ದಾನೆ. ಬೇಸಿಗೆ ಬಿಸಿಲು ಹಾಗೂ ಝಳಕ್ಕೆ ಮರದ ಕೆಳಗೆ ಮಲಗಿದ್ದಾಗ ತಾಪಮಾನ ತಾಳಲಾರದೆ ಮೃತಪಟ್ಟಿರಬಹದು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT