ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇರುವುದಾದರೆ ಸರಿಯಾಗಿ ಇರಿ, ಇಲ್ಲ ಹೊರಡಿ'; ಶಾಸಕ ಹೆಬ್ಬಾರಗೆ ಕುಟುಕಿದ ರೂಪಾಲಿ

Published 27 ಮಾರ್ಚ್ 2024, 7:58 IST
Last Updated 27 ಮಾರ್ಚ್ 2024, 7:58 IST
ಅಕ್ಷರ ಗಾತ್ರ

ಯಲ್ಲಾಪುರ: 'ಬೇಕಾದಾಗ ಬರುವುದು, ಬೇಡ ಅನಿಸಿದಾಗ ಬಿಟ್ಟುಕೊಂಡು ಹೋಗುವವರನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಸರಿಯಾಗಿ ಇರುವವರು ಇರಲಿ. ಇಲ್ಲಾ ಅಂದರೆ ಹೊರಡಲಿ' ಎನ್ನುವ ಮೂಲಕ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಪರೋಕ್ಷವಾಗಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಕುಟುಕಿದ್ದಾರೆ.

ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಬುಧವಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

'ಪಕ್ಷ ಅವರಿಗೆ ಏನೆಲ್ಲ ಕೊಟ್ಟಿದೆ. ಬೇಸರವಿದ್ದರೆ ಪಕ್ಷದ ವೇದಿಕೆಯಲ್ಲಿ ಮಾತಾಡಲಿ' ಎಂದ ಅವರು, 'ಬಿಜೆಪಿಯ ಒಬ್ಬ ಶಾಸಕರು ಇಲ್ಲಿ ಇಲ್ಲ. ಕಾಂಗ್ರೆಸ್‌ಗೆ ಹೋಗುತ್ತಾರೆ. ಎನ್ನಲಾಗುತ್ತಿದೆ. ಅವರ ಹೆಸರು ಹೇಳುವುದನ್ನು ಬಿಟ್ಟುಬಿಡಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT