ದಿನ ಭವಿಷ್ಯ: ಈ ರಾಶಿಯವರು ದೂರದ ಪ್ರಯಾಣಗಳಿಗೆ ಕಡಿವಾಣ ಹಾಕಿ
Published 21 ಏಪ್ರಿಲ್ 2024, 19:21 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೈದ್ಯ ವೃತ್ತಿಯಲ್ಲಿರುವವರಿಗೆ ಹೃದಯ ವಿದ್ರಾವಕ ರೋಗಿಯೊಬ್ಬರು ಭೇಟಿಯಾಗುವ ಸಾಧ್ಯತೆ ಇದೆ. ಸೂಕ್ಷ್ಮಗ್ರಹಿಯಾದ ನೀವು ಮುಂದಿನ ಆತಂಕ ಕಂಡುಕೊಳ್ಳಲಿದ್ದೀರಿ. ನಿಮ್ಮ ಪ್ರತಿಭೆ ಈ ದಿನ ಬೆಳಕಿಗೆ ಬರಲಿದೆ.
21 ಏಪ್ರಿಲ್ 2024, 19:21 IST
ವೃಷಭ
ನಿರಂತರ ಕೆಲಸ ಕಾರ್ಯಗಳಿಂದಾಗಿ ದಣಿದ ನಿಮಗೆ ಈ ದಿನ ಸಿಗಲಿರುವ ಸ್ವಲ್ಪಮಟ್ಟಿನ ಬಿಡುವು ಆರಾಮವೆನಿಸಲಿದೆ. ಸದ್ಗುರುವಿನ ದರ್ಶನದಿಂದ ಮನಸ್ಸಿನಲ್ಲಿರುವ ಪ್ರಶ್ನೆಗೆ ಉತ್ತರ ಸಿಗಲಿದೆ. ಇಂದೇ ಭೇಟಿ ಮಾಡಿ.
21 ಏಪ್ರಿಲ್ 2024, 19:21 IST
ಮಿಥುನ
ರೈತಾಪಿ ವರ್ಗದವರಿಗೆ ಉಸಿರುಗಟ್ಟಿಸುವಂತಹ ಸಂದರ್ಭವಿದ್ದಲ್ಲಿ ಅದನ್ನು ನಿವಾರಿಸಲು ಸರಿಯಾದ ಸಮಯದಲ್ಲಿ ಸ್ನೇಹಿತರೊಬ್ಬರು ಬರಲಿದ್ದಾರೆ. ದೂರದ ಪ್ರಯಾಣಗಳಿಗೆ ಆದಷ್ಟು ಕಡಿವಾಣ ಹಾಕಿ.
21 ಏಪ್ರಿಲ್ 2024, 19:21 IST
ಕರ್ಕಾಟಕ
ಗೆಳೆಯರ ಸವಾಲಿನಲ್ಲಿ ಸದಾ ವಿಜಯ ನಿಮ್ಮದೇ ಆಗಿರುವುದರಿಂದ ಬೇಸರವಿಲ್ಲದೆ ಸಂತಸದಿಂದ ಇರುವಿರಿ. ದುಶ್ಚಟಗಳಿಗೆ ಒಳಗಾಗಿ ಅದರಿಂದ ಹೊರಬರಬೇಕೆಂದು ಇರುವವರು ಇಂದೇ ಪ್ರಯತ್ನ ಆರಂಭಿಸಿ.
21 ಏಪ್ರಿಲ್ 2024, 19:21 IST
ಸಿಂಹ
ದೊಡ್ಡ ಮಟ್ಟದ ಲೋಕಕಲ್ಯಾಣಾರ್ಥವಾಗಿ ನಡೆಸುವ ಧಾರ್ಮಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಾಯ ಹಾಗೂ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬೆಂಬಲ ಸಿಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ.
21 ಏಪ್ರಿಲ್ 2024, 19:21 IST
ಕನ್ಯಾ
ದೀರ್ಘಕಾಲೀನ ಯೋಜನೆಗಳು ಫಲದಾಯಕವಾಗಿ ವೃತ್ತಿಪರರಿಗೆ ಕಾರ್ಯರಂಗದಲ್ಲಿ ಪ್ರಗತಿ ನೀಡಲಿವೆ. ನಿಮ್ಮ ವ್ರತ ಹಾಗೂ ಅನುಷ್ಠಾನದ ಫಲವಾಗಿ ನಿಮ್ಮ ಮಕ್ಕಳಿಗೆ ಶ್ರೇಯಸ್ಸಾಗುವುದು ಅನುಭವಕ್ಕೆ ಬರುತ್ತದೆ.
21 ಏಪ್ರಿಲ್ 2024, 19:21 IST
ತುಲಾ
ತಾಯಿಗೆ ನುರಿತ ವೈದ್ಯರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲು ವಿಶ್ವಾಸಿಗಳಿಂದ ವೈದ್ಯರ ಸಂಪರ್ಕಕ್ಕೆ ನೆರವು ಸಿಗಲಿದೆ. ಉನ್ನತ ಶಿಕ್ಷಣ ಪಡೆದವರು ಓದಿಗೆ ತಕ್ಕಂಥ ಕೆಲಸ ನಿರೀಕ್ಷಿಸುತ್ತಿದ್ದರೆ ಸದ್ಯ ಸಿಗುವುದು ಕಷ್ಟ.
21 ಏಪ್ರಿಲ್ 2024, 19:21 IST
ವೃಶ್ಚಿಕ
ರಾಸಾಯನಿಕ ವಸ್ತುಗಳ ಉತ್ಪಾದನೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಅವಗಢಗಳ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ಓಡುತ್ತಿರುವ ಪ್ರಪಂಚದೊಂದಿಗೆ ನೀವೂ ಸಹ ಓಡಲು ಪ್ರಯತ್ನಿಸುವುದು ಉತ್ತಮ.
21 ಏಪ್ರಿಲ್ 2024, 19:21 IST
ಧನು
ನಿಮ್ಮದೇ ಸಂಸ್ಥೆಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಹೊಸ ಸಂಸ್ಥೆಯ ಸ್ಥಾಪನೆ ಮಾಡಿದ್ದನ್ನು ನೋಡಿ ಅಸೂಯೆ ಪಡಬೇಡಿ. ನೀವು ಆಪ್ತರಲ್ಲಿಟ್ಟ ನಂಬಿಕೆಯು ಸುಳ್ಳಾಗುವ ಸಂದರ್ಭ ಬರಬಹುದು.
21 ಏಪ್ರಿಲ್ 2024, 19:21 IST
ಮಕರ
ಈಗ ನಿರ್ಮಾಣವಾಗಿರುವ ನಿಮ್ಮ ಸಂಚಾರಿ ಪ್ರವೃತ್ತಿಯನ್ನು ನಿಗದಿತ ವೇಳಾಪಟ್ಟಿ ಮಾಡಿಕೊಳ್ಳುವ ಮೂಲಕ ಸರಿಪಡಿಸಿಕೊಳ್ಳಬಹುದು. ಇಂದು ನಿಮಗೆ ನಿರ್ಜಲೀಕರಣದಂತಹಾ ಸಮಸ್ಯೆಗಳು ಕಾಡಬಹುದು.
21 ಏಪ್ರಿಲ್ 2024, 19:21 IST
ಕುಂಭ
ದುರ್ಜನರು, ದುರಾಚಾರಿಗಳಿಂದ ಉಂಟಾಗಬಹುದಾದ ಅಪಾಯದ ಸೂಚನೆ ಇದ್ದರೆ ಈ ತಕ್ಷಣವೇ ಮುನ್ನೆಚ್ಚರಿಕೆ ವಹಿಸುವುದು ಹೆಚ್ಚು ಸೂಕ್ತ. ಸಂಘ ಸಂಸ್ಥೆಯ ಜವಾಬ್ದಾರಿಯಿಂದ ಸದ್ಯಕ್ಕೆ ವಿಮುಖರಾಗಬೇಡಿ.
21 ಏಪ್ರಿಲ್ 2024, 19:21 IST
ಮೀನ
ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕೆಂದು ಯೋಚಿಸುತ್ತಿರುವ ವ್ಯಕ್ತಿಗಳಿಗೆ ಸಹಾಯದ ನೆರವು ಸಿಗಲಿದೆ. ಪ್ರಲೋಭನಗೆ ಒಳಗಾಗಿ ಪಾಲುದಾರರಿಗಾಗಲಿ ಸಹೋದ್ಯೋಗಿಗಳಿಗಾಗಲಿ ಮೋಸ ಮಾಡುವ ಯೋಚನೆ ಬೇಡ.
21 ಏಪ್ರಿಲ್ 2024, 19:21 IST