ಸದ್ಯಕ್ಕೆ ಬೆಂಗಳೂರಿನಿಂದ 50 ಜನ, ಅಲ್ಲೇ ಸ್ಥಳೀಯವಾಗಿ 20 ಜನ ಬರುವ ನಿರೀಕ್ಷೆ ಇದೆ. ಈ ರೈನಥಾನ್ನಲ್ಲಿ ಸ್ಥಳೀಯ ಸಾಧಕರನ್ನು ಸನ್ಮಾನಿಸುವ ಆಲೋಚನೆಯೂ ಇದೆ. ತಂಡದ ಗುರುತಿಗೆ ಟೀ ಶರ್ಟ್ ಹಾಗೂ ಬ್ಯಾಗ್ ನೀಡಲಾಗುವುದು. ಪರಿಸರದ ನಡುವೆ ಮಳೆಯಲ್ಲಿ ಹೆಜ್ಜೆ ಹಾಕುವವರಿಗೆ ಬಾಣಸಿಗರ ತಂಡ ಬಿಸಿ ಚಹಾ, ತಿಂಡಿ ಹಾಗೂ ಮಧ್ಯಾಹ್ನದ ಭೋಜನವನ್ನು ಅಲ್ಲಿಗೇ ತಂದು ಬಡಿಸುತ್ತಾರೆ.