ಅವರು ಪ್ರತಿದಿನ ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಕೇಂದ್ರದಿಂದ ₹4,860 ಕೋಟಿ ಬರಪರಿಹಾರ ಕೇಳಿದ್ದಾಗಿ ಹೇಳಿದ್ದರು. ಈಗ ₹18,108 ಕೋಟಿ ಪರಿಹಾರದ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನೂ ಸುಳ್ಳುಗಾರ ಎಂದು ಛೇಡಿಸಿದ ಅವರು, ಇಬ್ಬರೂ ಪ್ರತಿದಿನ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ನಿಯಮಗಳಿಗೆ ಅನುಗುಣವಾಗಿಯೇ ಹಣ ಬಿಡುಗಡೆ ಮಾಡಿದೆ. ಕರ್ನಾಟಕ ಮಾತ್ರವಲ್ಲ ತಮಿಳುನಾಡು ಹಾಗೂ ಅಸ್ಸಾಂಗೂ ಪರಿಹಾರ ಬಿಡುಗಡೆ ಮಾಡಿದೆ ಎಂದರು.