ದಕ್ಷಿಣ ಕನ್ನಡದವರು ಗೌರಿ ಹತ್ಯೆ ಮಾಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದ್ದಾರೆ. ಅವರ ಬಳಿ ಅಷ್ಟು ಖಚಿತ ಮಾಹಿತಿ ಇದ್ದರೆ ಆಧಾರ ಸಹಿತ ಗೃಹ ಸಚಿವರಿಗೆ ಮಾಹಿತಿ ನೀಡಬಹುದಿತ್ತು. ಸಂಶಯದ ಮುಳ್ಳನ್ನು ಯಾರ ಕಡೆಗೋ ತಿರುಗಿಸುವ ಯತ್ನ ಮಾಡಿರುವುದು ಸರಿಯಲ್ಲ ಎಂದರು.