ಜೈಪುರ: ವಿಶ್ವ ಪಾರಂಪರಿಕ ದಿನದ ಅಂಗವಾಗಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯವರ ಮೇಣದ ಪ್ರತಿಮೆಯನ್ನು ಜೈಪುರದ ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿ ಅನಾವರಣ ಮಾಡಲಾಗಿದೆ.
ವಿರಾಟ್ ಕೊಹ್ಲಿ ಪ್ರತಿಮೆ ನಿರ್ಮಿಸುವಂತೆ ಕಳೆದ ಒಂದು ವರ್ಷದಿಂದ ಪ್ರವಾಸಿಗರು, ವಿಶೇಷವಾಗಿ ಮಕ್ಕಳು ಮತ್ತು ಯುವಕರಿಂದ ಬಹಳ ಒತ್ತಾಯ ಕೇಳಿಬಂದಿದೆ ಎಂದು ಮ್ಯೂಸಿಯಂನ ಸಂಸ್ಥಾಪಕ ನಿರ್ದೇಶಕರಾದ ಅನೂಪ್ ಶ್ರೀವಾಸ್ತವ್ ಹೇಳಿದ್ದಾರೆ.
‘ಕೊಹ್ಲಿ ಪ್ರತಿಮೆ ಮ್ಯೂಸಿಯಂನಲ್ಲಿ ಇರಬೇಕೆಂದು ಅಭಿಮಾನಿಗಳ ಗಟ್ಟಿ ಅಭಿಪ್ರಾಯವಾಗಿತ್ತು. ವಿಶ್ವ ಪಾರಂಪರಿಕ ದಿನವಾದ ಇಂದು ಪ್ರತಿಮೆ ಅನಾವರಣಗೊಳಿಸಲಾಗಿದೆ’ಎಂದೂ ಅವರು ತಿಳಿಸಿದ್ದಾರೆ.
ನಗರ್ಗಢ ಕೋಟೆ ಪ್ರದೇಶದಲ್ಲಿರುವ ಮ್ಯೂಸಿಯಂನಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸೇರಿದಂತೆ 44 ಮೇಣದ ಪ್ರತಿಮೆಗಳಿವೆ.
ವಿರಾಟ್ ಕೊಹ್ಲಿಯವರ ಮೇಣದ ಪ್ರತಿಮೆ 35 ಕೆ.ಜಿ ತೂಕವಿದ್ದು, 2 ತಿಂಗಳಿಂದ ನಿರ್ಮಿಸಲಾಗಿದೆ.
ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಎಪಿಜೆ ಅಬ್ದುಲ್ ಕಲಾಂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಕಲ್ಪನಾ ಚಾವ್ಲಾ, ಅಮಿತಾಭ್ ಬಚ್ಚನ್ ಮತ್ತು ಮದರ್ ತೆರೇಸಾ ಅವರ ಮೇಣದ ಪ್ರತಿಮೆಗಳಿವೆ.