ಅನೇಕ ವರ್ಷಗಳಿಂದ ದೇವಸ್ಥಾನದಲ್ಲಿ ತೀರ್ಥ, ಪ್ರಸಾದ ನೀಡುವ ಜವಾಬ್ದಾರಿಯನ್ನು ಜಂಭೆ ಮತ್ತು ಗೋಪಿ ಮನೆತನದವರು ನಿಭಾಯಿಸುತ್ತ ಬಂದಿದ್ದರು. ವರ್ಷದ ಆರು ತಿಂಗಳು ಗೋಪಿ ಮನೆತನ ಮತ್ತು ಉಳಿದ ಆರು ತಿಂಗಳು ಜಂಭೆ ಮನೆತನಕ್ಕೆ ಜವಾಬ್ದಾರಿ ಹಂಚಿಕೆ ಮಾಡಲಾಗಿತ್ತು. ಆದರೆ, ರಾಮಚಂದ್ರಾಪುರ ಮಠ ದೇವಸ್ಥಾನದ ಆಡಳಿತ ನಿರ್ವಹಣೆ ಮಾಡುತ್ತಿದ್ದ ಅವಧಿಯಲ್ಲಿ ಗೋಪಿ ಮನೆತನಕ್ಕೆ ನೀಡಿದ್ದ ಜವಾಬ್ದಾರಿ ಹಿಂಪಡೆದಿತ್ತು.