ಕುಸುರಿ ಆಭರಣಗಳಿಗೆ ಹೆಸರಾಗಿರುವ ಬೆಂಗಳೂರಿನ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ವಾರ್ಷಿಕೋತ್ಸವದ ಪ್ರಯುಕ್ತ ಸಾಯಿಗೋಲ್ಡ್ ಹಬ್ಬ ಆಚರಿಸಲಿದೆ.
ಜೈಪುರದ ರಾಜಮನೆತನದ ಇತಿಹಾಸವನ್ನು ಸಾರುವ ಪಾರಂಪರಿಕ ಒಡವೆಗಳು, ಭಾರತೀಯ ಸಂಸ್ಕೃತಿಯನ್ವು ಬಿಂಬಿಸುವ ದೈವಿಕ ಆಭರಣಗಳು, ಭಕ್ತಿಯನ್ನು ಬಿಂಬಿಸುವ ಹಗುರಗಾತ್ರದ ಟೆಂಪಲ್ ಜ್ಯುವೆಲರಿ, ಹೊಳೆಯುವ ವಜ್ರದ ಸೆಟ್ಗಳು, ಚಿನ್ನದ ಆ್ಯಂಟಿಕ್ ಆಭರಣಗಳ ಅಮೋಘ ಸಂಗ್ರಹವನ್ನು ಹೊತ್ತು ತರುತ್ತಿದೆ. ಜತೆಗೆ ಈ ಬಾರಿ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ.
ಖರೀದಿಸುವ ಪ್ರತಿ1 ಕೆ.ಜಿ ಬೆಳ್ಳಿಯ ವಸ್ತುವಿನ ಮೇಲೆ ₹3000 ರಿಯಾಯಿತಿ , ಪ್ರತಿ 1 ಕ್ಯಾರೆಟ್ ವಜ್ರದ ಆಭರಣದ ಖರೀದಿಯ ಮೇಲೆ ₹10,000 ರಿಯಾಯಿತಿ, ಬೆಳ್ಳಿ ಆಭರಣ ಮೌಲ್ಯದ ಮೇಲೆ ಶೇ 10ರಷ್ಟು ರಿಯಾಯಿತಿ ನೀಡುತ್ತಿದೆ. ಚಿನ್ನ ಖರೀದಿಸುವ ಗ್ರಾಹಕರಿಗೂ ಬೆಳ್ಳಿ ಉಡುಗೊರೆಗಳಿವೆ.
ಒಂದು ಗ್ರಾಂ ಚಿನ್ನಾಭರಣ ಖರೀದಿಸಿದರೆ, 2 ಗ್ರಾಂ ಬೆಳ್ಳಿ ಉಚಿತವಾಗಿ ಪಡೆಯುವ ಅವಕಾಶವಿದೆ. ಚಿನ್ನದಲ್ಲಿ ಹೂಡಿಕೆ ಮಾಡಲು ಮಧ್ಯಮ ವರ್ಗದವರಿಗಾಗಿ ಶ್ರೀಸಾಯಿ ಸಮೃದ್ಧಿ ಉಳಿತಾಯ ಯೋಜನೆ ಹಾಗೂ ಶ್ರೀಸಾಯಿ ನಿತ್ಯ ನಿಧಿ ಉಳಿತಾಯ ಯೋಜನೆಯನ್ನು ತರಲಾಗಿದೆ ಎಂದು ಸಾಯಿಗೋಲ್ಡ್ ಪ್ಯಾಲೇಸ್ನ ಮಾಲೀಕ ಟಿ.ಎ.ಶರವಣ ತಿಳಿಸಿದ್ದಾರೆ.
ಎಲ್ಲ ಗ್ರಾಹಕರು ಕುಟುಂಬದವರಂತೆ, ಯುಗಾದಿ ಹಬ್ಬಕ್ಕೆ ಆಭರಣ ಖರೀದಿಸಲು ಗ್ರಾಹಕರು ಮುಂಗಡ ಬುಕ್ಕಿಂಗ್ ಕಾಯ್ದಿರಿಸಬಹುದು. ಬಸವನಗುಡಿ, ಎಚ್ಎಸ್ಆರ್ ಲೇಔಟ್, ಯಲಹಂಕ, ಕೆಆರ್ಪುರಂ ಮತ್ತು ನಾಗರಬಾವಿ ಶಾಖೆಗಳಲ್ಲಿ ಈ ರಿಯಾಯಿತಿ ಲಭ್ಯವಿದೆ.