ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬೇಸಿಗೆಗೆ ಜನರು ನಲುಗಿ ಹೋಗಿದ್ದಾರೆ. ಬಿಸಿಲ ಧಗೆಗೆ ಜನರು ಕಂಗೆಟ್ಟಿದ್ದಾರೆ. ಈ ಬಿರು ಬೇಸಿಗೆಯಲ್ಲಿ ನೀರು ಪೂರೈಕೆಗೆ ಮನುಷ್ಯರು ಹರಸಾಹಸ ಪಡುತ್ತಿದ್ದಾರೆ. ಇದು ಮನುಷ್ಯರ ಪಾಡಾದರೆ, ಬೇಸಿಗೆಯಲ್ಲಿ ಪ್ರಾಣಿಗಳೂ ಕೂಡ ನೀರಿಲ್ಲದೇ ಕಂಗಾಲಾಗುತ್ತವೆ. ಮನುಷ್ಯರು ಏನೋ ಮಾಡಿ ನೀರನ್ನು ಪೂರೈಸಿಕೊಳ್ಳುತ್ತಾರೆ, ಆದರೆ ಪ್ರಾಣಿಗಳಿಗೆ ಅದು ಅಸಾಧ್ಯ. ಅದಕ್ಕಾಗಿಯೇ ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರುಣಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.