ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಿಂದ ಹಿಂದೆ ಸರಿದ ಎಸ್‌ಎಡಿ ಅಭ್ಯರ್ಥಿ

Published 7 ಮೇ 2024, 14:47 IST
Last Updated 7 ಮೇ 2024, 14:47 IST
ಅಕ್ಷರ ಗಾತ್ರ

ಚಂಡೀಗಢ (ಪಿಟಿಐ): ಚಂಡೀಗಢ ಲೋಕಸಭಾ ಕ್ಷೇತ್ರದ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಅಭ್ಯರ್ಥಿ ಹರ್‌ದೀಪ್‌ ಸಿಂಗ್‌ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಪಕ್ಷವನ್ನೂ ತೊರೆದಿದ್ದಾರೆ.

ಚಂಡೀಗಢದ ಬಗ್ಗೆ ಶಿರೋಮಣಿ ಅಕಾಲಿದಳವು ಅಸಡ್ಡೆ ತೋರುತ್ತಿರುವುದರಿಂದ ಪಕ್ಷ ತೊರೆದಿರುವುದಾಗಿ ಹರ್‌ದೀಪ್‌ ಹೇಳಿದ್ದಾರೆ.

ಹರ್‌ದೀಪ್‌ ಅವರ ಜೊತೆಗೆ ಹಲವು ಕಾರ್ಯಕರ್ತರೂ ಪಕ್ಷ ತೊರೆದಿದ್ದಾರೆ. ಚಂಡೀಗಢ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಂಜಯ್‌ ಟಂಡನ್‌ ಹಾಗೂ ಕಾಂಗ್ರೆಸ್‌ನಿಂದ ಮನೀಶ್‌ ತಿವಾರಿ ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT