ಚಂಡೀಗಢ (ಪಿಟಿಐ): ಚಂಡೀಗಢ ಲೋಕಸಭಾ ಕ್ಷೇತ್ರದ ಶಿರೋಮಣಿ ಅಕಾಲಿ ದಳದ (ಎಸ್ಎಡಿ) ಅಭ್ಯರ್ಥಿ ಹರ್ದೀಪ್ ಸಿಂಗ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಪಕ್ಷವನ್ನೂ ತೊರೆದಿದ್ದಾರೆ.
ಚಂಡೀಗಢದ ಬಗ್ಗೆ ಶಿರೋಮಣಿ ಅಕಾಲಿದಳವು ಅಸಡ್ಡೆ ತೋರುತ್ತಿರುವುದರಿಂದ ಪಕ್ಷ ತೊರೆದಿರುವುದಾಗಿ ಹರ್ದೀಪ್ ಹೇಳಿದ್ದಾರೆ.
ಹರ್ದೀಪ್ ಅವರ ಜೊತೆಗೆ ಹಲವು ಕಾರ್ಯಕರ್ತರೂ ಪಕ್ಷ ತೊರೆದಿದ್ದಾರೆ. ಚಂಡೀಗಢ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಂಜಯ್ ಟಂಡನ್ ಹಾಗೂ ಕಾಂಗ್ರೆಸ್ನಿಂದ ಮನೀಶ್ ತಿವಾರಿ ಕಣಕ್ಕಿಳಿದಿದ್ದಾರೆ.