ಬೊಮ್ಮನಹಳ್ಳಿಯ ವಿವೇಕಾನಂದ ಸರ್ಕಲ್ನಿಂದ ಬನ್ನೇರುಘಟ್ಟ ರಸ್ತೆಯ ಐಐಎಂಬಿವರೆಗೆ ರಾತ್ರಿ ರೋಡ್ಶೋ ನಡೆಯಿತು. ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ರಥದ ಮಾದರಿಯ ವಾಹನದಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿ ಸೇರಿದ್ದ ಜನಸ್ತೋಮಕ್ಕೆ ಕೈ ಬೀಡುತ್ತಾ, ಹೂವಿನ ಪಕಳೆಗಳನ್ನು ಎಸೆಯುತ್ತಾ ಸಾಗಿದರು. ಸುಮಾರು 50 ನಿಮಿಷ ರೋಡ್ ಶೋ ನಡೆಯಿತು.