ಆತಿಥೇಯ ತಂಡದ ಸ್ಪಿನ್ನರ್ ರವಿ ಬಿಷ್ಣೋಯಿ, ನವೀನ್ ಉಲ್ ಹಕ್, ಶಾಮರ್ ಜೋಸೆಫ್ ಮತ್ತು ಮೊಹಸಿನ್ ಖಾನ್ ಅವರ ಮುಂದಿರುವ ಸವಾಲು ಕೂಡ ಸಣ್ಣದಲ್ಲ. ಚೆನ್ನೈ ತಂಡದ ಆರಂಭಿಕ ಬ್ಯಾಟರ್ ಋತುರಾಜ್, ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ, ಡ್ಯಾರಿಲ್ ಮಿಚೆಲ್ ಮತ್ತು ಮಹೇಂದ್ರಸಿಂಗ್ ಧೋನಿ ಉತ್ತಮ ಲಯದಲ್ಲಿದ್ಧಾರೆ. ಡೆವೊನ್ ಕಾನ್ವೆ ಗಾಯಗೊಂಡಿರುವುದರಿಂದ ವಿಶ್ರಾಂತಿ ಪಡೆದಿದ್ದು, ಅವರ ಬದಲಿಗೆ ಇಂಗ್ಲೆಂಡ್ ತಂಡದ ಆಟಗಾರ ರಿಚರ್ಡ್ ಗ್ಲೀಸನ್ ವರನ್ನು ಚೆನ್ನೈ ಸೇರ್ಪಡೆ ಮಾಡಿಕೊಂಡಿದೆ. ರಚಿನ್ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಲಯಕ್ಕೆ ಮರಳಿದರೆ ಬ್ಯಾಟಿಂಗ್ ವಿಭಾಗ ಮತ್ತಷ್ಟು ಗಟ್ಟಿಯಾಗಲಿದೆ.