ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಪದಿಂದ ಶರ್ಮಿಳಾ ನಾಮಪತ್ರ: ಅಣ್ಣನ ಪಕ್ಷದ ಸೋದರ ಸಂಬಂಧಿಯೇ ಎದುರಾಳಿ

Published 20 ಏಪ್ರಿಲ್ 2024, 7:45 IST
Last Updated 20 ಏಪ್ರಿಲ್ 2024, 7:45 IST
ಅಕ್ಷರ ಗಾತ್ರ

ಕಡಪ (ಆಂಧ್ರಪ್ರದೇಶ): ಆಂಧ್ರಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆ ವೈ.ಎಸ್‌ ಶರ್ಮಿಳಾ ಅವರು ಕಡಪ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದರು. ಅವರಿಗೆ ಸುನೀತಾ ನಾರಾರೆಡ್ಡಿ ಹಾಗೂ ಸೋದರ ಸಂಬಂಧಿ, 2016ರ ಚುನಾವಣೆ ವೇಳೆ ಕೊಲೆಗೀಡಾದ ವೈ.ಎಸ್‌ ವಿವೇಕಾನಂದ ರೆಡ್ಡಿ ಅವರ ಪುತ್ರಿ ಸಾಥ್‌ ನೀಡಿದರು.

‘ಕಡಪ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕಡಪದ ಜನರು ವೈ.ಎಸ್‌ ರಾಜಶೇಖರ ರೆಡ್ಡಿ ಹಾಗೂ ವಿವೇಕಾನಂದ ಅವರನ್ನು ಮರೆತಿಲ್ಲ. ಅವರನ್ನು ನೆನಪಿನಲ್ಲಿಟ್ಟುಕೊಂಡು ಈ ಬಾರಿ ಜನ ಮತ ಚಲಾಯಿಸಲಿದ್ದಾರೆ’ ಎಂದು ಶರ್ಮಿಳಾ ಹೇಳಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಇಡುಪುಲಪಾಯದಲ್ಲಿರುವ ತಂದೆ ರಾಜಶೇಖರ ರೆಡ್ಡಿ ಅವರ ಸಮಾಧಿಗೆ ತೆರೆಳಿ ಪೂಜೆ ಸಲ್ಲಿಸಿದರು.

ಕಡಪದಲ್ಲಿ ತಮ್ಮ ಹಿರಿಯ ಸಹೋದರ ಜಗನ್‌ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷದ ಅಭ್ಯರ್ಥಿಯನ್ನು ಶರ್ಮಿಳಾ ಎದುರಿಸಲಿದ್ದಾರೆ. ಸೋದರ ಸಂಬಂಧಿ ವೈ.ಎಸ್‌ ಅವಿನಾಶ್‌ ರೆಡ್ಡಿ ಎದುರಾಳಿಯಾಗಿದ್ದಾರೆ.

ಆಂಧ್ರದ 25 ಲೋಕಸಭಾ ಕ್ಷೇತ್ರಗಳಿಗೆ ಮೇ 13ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT