ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ವಯನಾಡ್‌: ಕಾಂಗ್ರೆಸ್‌ ಮುಖಂಡ ಸುಧಾಕರನ್‌ ಬಿಜೆಪಿಗೆ ಸೇರ್ಪಡೆ

Published 20 ಏಪ್ರಿಲ್ 2024, 15:38 IST
Last Updated 20 ಏಪ್ರಿಲ್ 2024, 15:38 IST
ಅಕ್ಷರ ಗಾತ್ರ

ವಯನಾಡ್‌: ಕಾಂಗ್ರೆಸ್‌ನ ವಯನಾಡ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಸುಧಾಕರನ್‌ ಅವರು ಶನಿವಾರ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ಬಳಿಕ ಮಾತನಾಡಿದ ಅವರು, ‘ವಯನಾಡ್‌ ಸಂಸದ ರಾಹುಲ್‌ ಗಾಂಧಿ ಅವರು ಪಕ್ಷದ ಜಿಲ್ಲಾ ಮುಖಂಡರಿಗೂ ಲಭ್ಯರಿರಲಿಲ್ಲ. ಹಾಗಾದರೆ ಸಾಮಾನ್ಯ ಜನರ ಸ್ಥಿತಿ ಏನು? ಅವರಿಗೆ ಕ್ಷೇತ್ರದ ಜನರು ಐದು ವರ್ಷ ಅವಕಾಶ ನೀಡಿದ್ದಾರೆ. ಇನ್ನೊಂದು ಅವಧಿಗೂ ಅವರೇ ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಕುರಿತ ನಿರೀಕ್ಷೆಗಳು ಹುಸಿಯಾಗಬಹುದು’ ಎಂದು ಹೇಳಿದರು. 

ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ರಾಹುಲ್‌ ಅವರು ಘೋಷಿಸಲಿ ಎಂದೂ ಸವಾಲು ಹಾಕಿದರು.

ಇತರ ಇಬ್ಬರು ಪ್ರಮುಖ ನಾಯಕರೂ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದರು. ವಯನಾಡ್‌ನಲ್ಲಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT