ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ಆರೋಪ: ಮುಂದುವರಿದ ಧರಣಿ

Published : 22 ಸೆಪ್ಟೆಂಬರ್ 2024, 7:28 IST
Last Updated : 22 ಸೆಪ್ಟೆಂಬರ್ 2024, 7:28 IST
ಫಾಲೋ ಮಾಡಿ
Comments

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಕಾರ್ಖಾನೆ ಆವರಣದಲ್ಲಿ ರೈತ ಸಂಘಗಳ ಒಕ್ಕೂಟ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶನಿವಾರ ಮುಂದುವರಿಯಿತು.

ಅವ್ಯವಹಾರದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಸೆ.25ರಂದು ನಡೆಯಲಿರುವ ಕಾರ್ಖಾನೆ ವಾರ್ಷಿಕ ಮಹಾಸಭೆಯಲ್ಲಿ ಠರಾವು ಪಾಸ ಮಾಡಬೇಕೆಂದು ಆಗ್ರಹಿಸಿದರು.

ತನಿಖೆ ನಡೆಸಲು ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ರೈತರು, ಲೆಕ್ಕ ಪರಿಶೋಧಕರು, ಪೊಲೀಸರು, ಕಾರ್ಖಾನೆಯ ನಿರ್ದೇಶಕರು, ನಿವೃತ್ತ ಸೈನ್ಯಾಧಿಕಾರಿ ಸೇರಿ ಉನ್ನತ ಅಧಿಕಾರಿಗಳ ಒಳಗೊಂಡ ಸಮಿತಿ ರಚಿಸಿ, ಕಾನುನಾತ್ಮಕ ತನಿಖೆ ನಡೆಸಲು ಒಪ್ಪಿಗೆಯ ಠರಾವು ಪಾಸ್ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ. ತನಿಖೆಗೆ ಒಪ್ಪಿಗೆ ಸಿಗುವ ತನಕ ಧರಣಿ ಸತ್ಯಾಗ್ರಹ ಮುಂದುವರೆಸುವುದಾಗಿ ಘೋಷಿಸಿದ್ದಾರೆ.

ರೈತಸಂಘಗಳ ಒಕ್ಕೂಟದ ಮುಖಂಡರಾದ ಪ್ರಕಾಶ ನಾಯ್ಕ, ಬಸವರಾಜ ಮೊಕಾಶಿ, ಬಸನಗೌಡ ಪಾಟೀಲ, ಶಿವಾನಂದ ಜ್ಯೋತಿ, ರುದ್ರಪ್ಪ ಕೊಡ್ಲಿ, ಸುರೇಶ ಕರವಿನಕೊಪ್ಪ, ಬೀರಪ್ಪ ದೇಶನೂರ, ಆನಂದ ಹುಚ್ಚಗೌಡ್ರ, ಶಂಕರೆಪ್ಪ ಸುಣಗಾರ, ಸಂಜೀವಕುಮಾರ ತಿಲಗರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT