ತಾಲ್ಲೂಕಿನ ಗುಡ್ಲನರಸಿಂಹನಹಳ್ಳಿಯಲ್ಲಿ ಅವಿಭಕ್ತ ಕುಟುಂಬದೊಂದಿಗೆ ನೆಲೆಸಿರುವ ಜಿ.ಎನ್.ಮನ್ನಾರಸ್ವಾಮಿ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಪಪ್ಪಾಯ (3 ಎಕರೆ), ಬಾಳೆ (3 ಎಕರೆ), ಸೋರೆ (1ಎಕರೆ), ಚಪ್ಪರಬದನೆ (2 ಎಕರೆ), ಡಬಲ್ ಬೀನ್ಸ್ (1 ಎಕರೆ), ಹೀರೆಕಾಯಿ (1 ಎಕರೆ) ಮುಂತಾದ ತರಕಾರಿ ಬೆಳೆಯುತ್ತಿದ್ದಾರೆ. ಚಪ್ಪರದ ಅವಶ್ಯಕತೆಯಿರುವ ತರಕಾರಿ ಬೆಳೆಗಳಿಗೆ ದ್ರಾಕ್ಷಿಗೆ ಹಾಕುವಂತಹ ಚಪ್ಪರ ಹಾಕಿಸಿದ್ದಾರೆ. ಮೂರು ಕೊಳವೆ ಬಾವಿ ಹೊಂದಿರುವ ಇವರು ಅತ್ಯುತ್ತಮ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.