ಹೋಟೆಲ್ ಸದಾ ಕಾಲ ಗ್ರಾಹಕರಿಂದ ತುಂಬಿರುತ್ತದೆ. ಮಧ್ಯಾಹ್ನ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಹೋಟೆಲ್ನಲ್ಲಿ ಮುದ್ದೆ– ಉಪ್ಸಾರು ರುಚಿ ಸವಿಯಲು ಆಹಾರ ಪ್ರಿಯರು ಇತ್ತ ಬರುತ್ತಾರೆ.
ಕುಶಾಲ್ ಮಾಲೀಕತ್ವದಲ್ಲಿ ಹೋಟೆಲ್ 19 ವರ್ಷಗಳ ಹಿಂದೆ ಪ್ರಾರಂಭವಾಯಿತು. ಅವರಿಗೆ ಪತ್ನಿ ಪ್ರೇಮ ಕೂಡ ಕೈ ಜೋಡಿಸಿದ್ದಾರೆ. ಕಾಲಕ್ಕೆ ತಕ್ಕಂತೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಸಸ್ಯಹಾರ ಸಿದ್ಧಪಡಿಸಿ ಗ್ರಾಹಕರಿಗೆ ಉಣಬಡಿಸಲಾಗುತ್ತಿದೆ. ನಿಯಮಾವಳಿ ಪ್ರಕಾರ ದರ ಪಡೆಯಲಾಗುತ್ತಿದೆ.
ಗ್ರಾಹಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್ ನಿರ್ವಹಣೆಗೂ ಆದ್ಯತೆ ಕೊಟ್ಟಿದ್ದಾರೆ. ‘ಗ್ರಾಹಕ ನೀಡುವ ಹಣಕ್ಕೆ ಮೋಸವಾಗದಂತೆ ಸೇವೆ ನೀಡುವುದೇ ಗುರಿಯಾಗಿದೆ. ಪ್ರಸ್ತುತ ದರದಲ್ಲಿ ಗುಣಮಟ್ಟದ ಆಹಾರ ನೀಡುವುದು ಕಷ್ಟವಾಗಿದ್ದರೂ, ಉತ್ತಮ ಗುಣಮಟ್ಟದ ದಿನಸಿ ಪದಾರ್ಥ ಬಳಸಿ ನೀಡಲಾಗುತ್ತಿದೆ’ ಎಂದು ಕುಶಾಲ್ ಪ್ರತಿಕ್ರಿಯಿಸಿದರು.
‘ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆ ಜನರು ಕೆನರಾ ಪುಡ್ ಸೆಂಟರ್ ಹೋಟೆಲ್ನತ್ತ ಬರುತ್ತಾರೆ. ರುಚಿಕರವಾದ ಕಾಫಿ ತಿಂಡಿ, ಊಟ, ಜನರಿಗೆ ಲಭ್ಯವಾಗಿದೆ’ ಎಂದು ಗ್ರಾಹಕ ಮೋಹನ್ ಹೇಳಿದರು.