'ನಾಡಿನ ಜನರ ಆಸೆಯದಂತೆ ವೀರರಾಣಿ ಚನ್ನಮ್ಮ ಸ್ಮಾರಕ ಭಾವಿ ಹಾಗೂ ವೀರ ಮಾತೆಯ ಐಕ್ಯಸ್ಥಳವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ. ಭಾವಿಯನ್ನು ಸಂಪೂರ್ಣವಾಗಿ ಹೊಳೇತ್ತ್ತಿ, ಗೋಡೆ ನಿರ್ಮಿಸಿ, ಗ್ರೈನೇಟ್ ಹಾಕಿ ಸುಂದರ ತಾಣ ಮಾಡಲು ಸೂಚಿಸಿದ್ದೇನೆ. ಬರುವ ದಿನಗಳಲ್ಲಿ ಐಕ್ಯಸ್ಥಳದಲ್ಲಿ ರಾಣಿ ಚನ್ನಮ್ಮಾಜಿ ಜೀವನ ಚರಿತ್ರೆ ಪರಿಚಯಿಸುವ ನಿಟ್ಟಿನಲ್ಲಿ ಮೂರ್ತಿಗಳನ್ನು ಹಾಗೂ ಮ್ಯೂಸಿಯಂ ನಿರ್ಮಾಣ, ಚಿತ್ರಗಳ ಮೂಲಕ ಇತಿಹಾಸ ತಿಳಿಸುವ ಬಗ್ಗೆ ಯೋಜನೆ ಹಾಕಲಾಗಿದೆ. ಶೀಘ್ರ ಕೆಲಸ ಆರಂಭವಾಗಲಿದೆ' ಎಂದರು.