ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಬ್ರಿಜೇಶ್ ಪಾಟೀಲ್, ‘ಅರ್ಜಿದಾರರು ಇದೇ 9ರಿಂದ 13ರವರೆಗೆ ಸಾರ್ವಜನಿಕ ನವರಾತ್ರಿ ಉತ್ಸವ ಆಚರಿಸಲಿದ್ದಾರೆ. ಇದರ ಸಿದ್ಧತೆಗಾಗಿ 6ರಿಂದ 8ರವರೆಗೆ ಪೆಂಡಾಲ್, ಮಳೆ ರಕ್ಷಣಾ ಶಾಮಿಯಾನ ಹಾಕಲು ಅವಕಾಶ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ಪುರಸ್ಕರಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.