‘ಮನುಷ್ಯನಿಗೆ ದೇವರು ಧರ್ಮಕ್ಕಿಂತ ಮೊದಲು ಅನ್ನದ ಅಗತ್ಯವಿದೆ. ಅನ್ನ, ಅರಿವು, ಔಷಧ ಹಾಗೂ ಆಶ್ರಯವನ್ನು ಮನುಷ್ಯನಿಗೆ ಮೂಲಭೂತವಾಗಿ ಒದಗಿಸಬೇಕೆಂದು ಬಸವಣ್ಣ ಹೇಳಿದ್ದಾರೆ. ದೇವರು ಮತ್ತು ಧರ್ಮದ ಬಗ್ಗೆ ಸರಿಯಾದ ರೀತಿಯ ಪರಿಕಲ್ಪನೆ ಕೊಡಬೇಕಾಗಿದೆ. ಇವುಗಳ ಬಗ್ಗೆ ಸರಿಯಾದ ಪರಿಕಲ್ಪನೆ ನೀಡದಿದ್ದರೆ ಧಾರ್ಮಿಕ ಮುಖಂಡರು ಜನರನ್ನು ಗ್ರಾಹಕರಂತೆ ನೋಡುತ್ತಾರೆ’ ಎಂದು ಹೇಳಿದರು.