ಮಹದೇವಪುರ ಕ್ಷೇತ್ರದಲ್ಲಿ ಇರುವ ನಾಲ್ಕು ನಗರಗಳಲ್ಲಿ 6,000ಕ್ಕೂ ಅಧಿಕ ಇಸ್ತ್ರಿವಾಲಾಗಳಿದ್ದಾರೆ. ಅವರನ್ನು ಇದ್ದಿಲು ಚಾಲಿತ ಇಸ್ತ್ರಿ ಪೆಟ್ಟಿಗೆಯಿಂದ ಎಲ್ಪಿಜಿ ಇಸ್ತ್ರಿ ಪೆಟ್ಟಿಗೆಗೆ ಬದಲಾಯಿಸಲಾಗಿದೆ. ಇದರಿಂದ ವಾರ್ಷಿಕವಾಗಿ ಅವರ ಆದಾಯ ₹30 ಕೋಟಿ ಹೆಚ್ಚಿಸಿದಂತಾಗಲಿದೆ. ಇಸ್ತ್ರಿ ಹಾಕುವವರ ಖರ್ಚು ಕಡಿಮೆಯಾಗಿ ಶೇ 25ರಷ್ಟು ಆದಾಯ ಹೆಚ್ಚಳವಾಗಿದೆ. 3,000 ಟನ್ ಇದ್ದಿಲು ಬಳಕೆ ಕಡಿಮೆಯಾಗಿರುವುದರಿಂದ ಪರಿಸರ ಮಾಲಿನ್ಯವೂ ಕಡಿಮೆಯಾಗಿದೆ. ಇಸ್ತ್ರಿವಾಲಾಗಳ ಆರೋಗ್ಯ ಹಾಳಾಗುವುದೂ ತಪ್ಪಿದೆ ಎಂದು ಮಾಹಿತಿ ನೀಡಿದೆ.