ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ: ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ಗದಗ ಜಿಲ್ಲೆಯ ಅಂದಯ್ಯ ಅರವಟಗಿಮಠ, ಆಧುನಿಕ ವಚನ ರಚನೆಗೆ ಉಡುಪಿ ಜಿಲ್ಲೆಯ ಕಾತ್ಯಾಯಿನಿ ಕುಂಜಿಬೆಟ್ಟು, ವಚನ ಸಂಗೀತಕ್ಕೆ ಬೆಂಗಳೂರಿನ ರಂಜನಿ ವಾಸುಕಿ ಹಾಗೂ ರಾಯಚೂರಿನ ವಡವಾಟಿ ಶಾರದಾ ಭರತ್ ಆಯ್ಕೆಯಾಗಿದ್ದಾರೆ. ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆಗೆ ಓಂಪ್ರಕಾಶ್ ಎಚ್.ಎಲ್., ‘ರಮಣಶ್ರೀ ಪ್ರೋತ್ಸಾಹ ಪುರಸ್ಕಾರ’ಕ್ಕೆ ಬೆಂಗಳೂರಿನ ಸಂಗಮೇಶ್ ಉಪಾಸೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹20 ಸಾವಿರ ನಗದು ಒಳಗೊಂಡಿದೆ.