ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೀರಣ್ಣ ರಾಜೂರಗೆ ‘ರಮಣಶ್ರೀ ಪ್ರಶಸ್ತಿ’

Published : 5 ಅಕ್ಟೋಬರ್ 2024, 15:56 IST
Last Updated : 5 ಅಕ್ಟೋಬರ್ 2024, 15:56 IST
ಫಾಲೋ ಮಾಡಿ
Comments

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ನೀಡುವ 2024ನೇ ಸಾಲಿನ ‘ರಮಣಶ್ರೀ ಶರಣ ಪ್ರಶಸ್ತಿ’ಗಳು ಘೋಷಣೆಯಾಗಿವೆ.

‘ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿ’ಗೆ ಧಾರವಾಡದ ಸಾಹಿತಿ ವೀರಣ್ಣ ರಾಜೂರ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ₹ 50 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.

‘ರಮಣಶ್ರೀ ಶರಣ ಹಿರಿಯ ಶ್ರೇಣಿ: ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ಬೆಂಗಳೂರಿನ ಎಚ್.ಎಸ್. ಸಿದ್ದಗಂಗಪ್ಪ ಮತ್ತು ಅಕ್ಕಲ ಕೋಟೆಯ ಗುರುಲಿಂಗಪ್ಪ ಧಬಾಲೆ, ಆಧುನಿಕ ವಚನ ರಚನೆಗೆ ಮೈಸೂರಿನ ಸಿ.ಪಿ.ಸಿದ್ಧಾಶ್ರಮ ಮತ್ತು ಹಾಸನದ ಸುಶೀಲಾ ಸೋಮಶೇಖರ್‌, ವಚನ ಸಂಗೀತಕ್ಕೆ ಬೆಂಗಳೂರಿನ ಎಂ.ಎಸ್. ಶೀಲಾ ಹಾಗೂ ಎಂ.ವಿ. ತ್ಯಾಗರಾಜ್‌ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹ 40 ಸಾವಿರ ನಗದು ಒಳಗೊಂಡಿದೆ.

ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ: ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ಗದಗ ಜಿಲ್ಲೆಯ ಅಂದಯ್ಯ ಅರವಟಗಿಮಠ, ಆಧುನಿಕ ವಚನ ರಚನೆಗೆ ಉಡುಪಿ ಜಿಲ್ಲೆಯ ಕಾತ್ಯಾಯಿನಿ ಕುಂಜಿಬೆಟ್ಟು, ವಚನ ಸಂಗೀತಕ್ಕೆ ಬೆಂಗಳೂರಿನ ರಂಜನಿ ವಾಸುಕಿ ಹಾಗೂ ರಾಯಚೂರಿನ ವಡವಾಟಿ ಶಾರದಾ ಭರತ್‌ ಆಯ್ಕೆಯಾಗಿದ್ದಾರೆ. ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆಗೆ ಓಂಪ್ರಕಾಶ್‌ ಎಚ್.ಎಲ್., ‘ರಮಣಶ್ರೀ ಪ್ರೋತ್ಸಾಹ ಪುರಸ್ಕಾರ’ಕ್ಕೆ ಬೆಂಗಳೂರಿನ ಸಂಗಮೇಶ್ ಉಪಾಸೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹20 ಸಾವಿರ ನಗದು ಒಳಗೊಂಡಿದೆ.

ನ. 18 ರಂದು ಬೆಂಗಳೂರಿನ ರಮಣಶ್ರೀ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಷಡಕ್ಷರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT