ದೀಪಾಲಂಕಾರ ಉಪ ಸಮಿತಿಯ ಅಧ್ಯಕ್ಷ ಸೈಯದ್ ಇಕ್ಬಾಲ್ ಮಾತನಾಡಿ, ‘ದೀಪಾಲಂಕಾರವು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ದಸರೆಗೆ ಹೆಚ್ಚಿನ ಮೆರುಗು ನೀಡಿದೆ. ಸೆಸ್ಕ್ ನಗರವನ್ನೇ ಅರಮನೆಯಂತೆ ಅಲಂಕರಿಸಿದೆ. ಪದಾಧಿಕಾರಿಗಳ ನೇಮಕ ಆದೇಶವು ತಡವಾಗಿ ಕೈಸೇರಿತು. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತೇವೆ’ ಎಂದು ತಿಳಿಸಿದರು.