ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
18/08/2024 - 24/08/2024
ವಾರ ಭವಿಷ್ಯ: ಸಂಗಾತಿಯು ಹೆಚ್ಚು ಶ್ರಮಪಟ್ಟು ಸಂಸಾರಕ್ಕೆ ನೆರವಾಗುವರು
Published 18 ಆಗಸ್ಟ್ 2024, 1:26 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವ್ಯಾಪಾರಿ ಮನೋಭಾವ ನಿಮ್ಮಲ್ಲಿ ಇರುತ್ತದೆ. ಹೀಗಾಗಿ ವ್ಯಾಪಾರದ ಬಗ್ಗೆ ಹೆಚ್ಚು ಚಿಂತನೆ ಮಾಡುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಕೃಷಿಯಿಂದ ಹೆಚ್ಚು ಆದಾಯ ವಿರುತ್ತದೆ. ವಿದ್ಯಾರ್ಥಿಗಳಿಗೆಉತ್ತಮಕಾಲ ಮತ್ತು ಉತ್ತಮ ಫಲಿತಾಂಶ ಬರುವ ಅವಕಾಶ ಗಳಿವೆ. ಒಳರೋಗಗಳುನಿಮ್ಮನ್ನುಕಾಡಬಹುದು ಕುಟುಂಬದಲ್ಲಿಹೊಂದಾಣಿಕೆ ಚೆನ್ನಾಗಿ ಇರುತ್ತದೆ. ಭೂಮಿ ವ್ಯಾಪಾರ ಮಾಡುವವರೆಗೆ ಲಾಭವಿರು ತ್ತದೆ. ವಿದ್ಯಾರ್ಥಿಗಳಿಗೆ ಪ್ರಗತಿ ಇರುತ್ತದೆ. ನಿಮ್ಮ ಸಂಗಾತಿಗೆ ಅಪೇಕ್ಷಿಸಿದ ಭೂಮಿ ಅಥವಾ ನಿವೇ ಶನ ದೊರೆಯುತ್ತದೆ. ಹೆಚ್ಚಿನ ಅನುಕೂಲಕ್ಕಾಗಿ ನರಸಿಂಹ ಪ್ರಾರ್ಥನೆಯನ್ನು ಮಾಡಿರಿ.
ವೃಷಭ
ಪ್ರಕೃತಿಯೊಂದಿಗೆ ಕಾಲ ಕಳೆಯುವ ಮನಸ್ಸು ಇರುತ್ತದೆ. ನಿಮ್ಮ ಚಟುವಟಿಕೆಗಳಿಂದ ಆದಾಯವನ್ನು ವೃದ್ಧಿಸಿಕೊಳ್ಳಬಹುದು.ನಿಮ್ಮ ಆದಾಯವು ಅಗತ್ಯವನ್ನು ಪೂರೈಸುವ ಹತ್ತಿರ ಬರುತ್ತದೆ ಸೌಮ್ಯವಾಗಿ ಮಾತನಾಡಿ ಜನರ ಮನಸನ್ನು ಗೆಲ್ಲುವಿರಿ. ಮನೆ ಪಾಠ ಹೇಳುವವ ರಿಗೆ ಮತ್ತು ಸ್ಪರ್ಧಾತ್ಮಕ ತರಬೇತಿ ಪಾಠವನ್ನು ಮಾಡುವವರಿಗೆ ಬೇಡಿಕೆ ಮತ್ತು ಲಾಭವು ಹೆಚ್ಚು ತ್ತದೆ. ಧಾರ್ಮಿಕ ವಿದ್ಯೆಯನ್ನು ಕಲಿಸುವವರಿಗೆ ಮತ್ತು ಕಲಿಯುವವರಿಗೆ ಸಾಕಷ್ಟು ಅನುಕೂಲತೆ ಗಳು ಒದಗುತ್ತವೆ.ಹೈನುಗಾರಿಕೆಯ ಬಗ್ಗೆ ಸಲಹೆ ಕೊಡುವವರಿಗೆ ಲಾಭವಿರುತ್ತದೆ. ಹೆಚ್ಚಿನ ಒಳಿತಿ ಗಾಗಿ ಗಣೇಶ ದುರ್ಗೆಯರನ್ನುಪ್ರಾರ್ಥಿಸಿರಿ.
ಮಿಥುನ
ವಾರದ ಆರಂಭ ತೃಪ್ತಿದಾಯಕವಾಗಿರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಿಂದ ಆದಾಯ ಹೆಚ್ಚಿಸಿ ಕೊಳ್ಳುವತ್ತ ಗಮನಹರಿಸುವಿರಿ. ಕೃಷಿಕರಿಗೆ ಬೆಳೆ ಯಿಂದ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಸ್ವಂತ ಆರೋಗ್ಯಕ್ಕಾಗಿ ಹಣಖರ್ಚಾಗುತ್ತದೆ. ಸಂಗಾತಿ ಸಂತೋಷಕ್ಕಾಗಿಯೂ ಹಣಖರ್ಚಾಗುತ್ತದೆ. ಉದ್ದಿಮೆದಾರರಿಗೆ ಇದ್ದ ಕಾನೂನು ತೊಡಕು ಗಳು ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ. ರಾಜಕೀಯ ನಾಯಕರುಗಳಿಗೆ ಹೆಚ್ಚು ಅನುಕೂಲವಾಗುವಂತಹ ಸಂದರ್ಭಗಳು ಎದುರಾಗುತ್ತವೆ.ಇನ್ನೂ ಹೆಚ್ಚಿನ ಒಳಿತಿಗಾಗಿ ಶಿವ ಮತ್ತು ಗಣೇಶರನ್ನು ಧ್ಯಾನ ಮಾಡಿ.
ಕರ್ಕಾಟಕ
ಮನಸ್ಸಿನಲ್ಲಿ ಪ್ರಶಾಂತತೆಯನ್ನು ಕಾಪಾಡಿಕೊಳ್ಳುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ಧಾರ್ಮಿಕತೆ ಎದ್ದು ಕಾಣುತ್ತದೆ. ಆಸ್ತಿಸಂಬಂಧಿತ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಭೂಮಿ ಯನ್ನು ಪರಿವರ್ತಿಸುವವರಿಗೆ ಹೆಚ್ಚಿನ ಲಾಭವಿ ರುತ್ತದೆ. ಕೃಷಿಕರಿಗೆ ಲಾಭವಿರುತ್ತದೆ. ಕೃಷಿ ಉತ್ಪನ್ನ ಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುತ್ತದೆ. ಕೆಲವರಿಗೆ ಪ್ರೀತಿ ಪ್ರೇಮ ಗಳಲ್ಲಿ ಯಶಸ್ಸು ದೊರಕುತ್ತದೆ.ವಿದೇಶಿ ವ್ಯವ ಹಾರ ಮಾಡುವವರಿಗೆ ಹೆಚ್ಚಿನ ಅನುಕೂಲವಿರು ತ್ತದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಮತ್ತು ದುರ್ಗಾ ಪ್ರಾರ್ಥನೆ ಮಾಡಿರಿ.
ಸಿಂಹ
ವ್ಯಕ್ತಿತ್ವದಲ್ಲಿ ಬಹಳ ಗಂಭೀರತೆ ಇರುತ್ತದೆ. ಆದಾಯದಲ್ಲಿ ಕಡಿಮೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸಾರ್ವಜನಿಕರ ಸಹಾಯ ದೊರೆ ಯುತ್ತದೆ. ಕೃಷಿಕರಿಗೆ ಸಿಗಬೇಕಾಗಿದ್ದ ಧನ ಸಹಾಯಗಳು ದೊರೆಯುತ್ತವೆ.ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿರುತ್ತದೆ. ಶೀತ ಸಂಬಂಧಿ ಕಾಯಿಲೆಗಳು ಕೆಲವರನ್ನು ಬಾಧಿಸಬಹುದು. ಸಂಗಾತಿಯು ಹೆಚ್ಚು ಶ್ರಮಪಟ್ಟು ಸಂಸಾರಕ್ಕೆ ನೆರವಾಗುವರು. ವ್ಯಾಪಾರ ವ್ಯವಹಾರಗಳಲ್ಲಿ ಲಾಭವನ್ನು ಕಾಣಬಹುದು. ಸರ್ಕಾರಿ ಹಣಗಳು ಬರುವುದು ನಿಧಾನವಾಗಬಹುದು. ಹಿರಿಯರ ಕೃಷಿ ಭೂಮಿಯಿಂದ ಆದಾಯವಿರುತ್ತದೆ. ಹೆಚ್ಚಿನ ಒಳಿತಿಗಾಗಿ ದುರ್ಗಾ ಶನೇಶ್ಚರ ಧ್ಯಾನ ಮಾಡಿರಿ.
ಕನ್ಯಾ
ಅತಿಯಾದ ಆಲಸೀತನ ಮೈಗೂಡ ಬಹುದು. ಧಾರ್ಮಿಕ ಶ್ರದ್ಧೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ಆದಾಯವು ಕಡಿಮೆ ಇರುತ್ತದೆ. ಕೃಷಿಉತ್ಪನ್ನಗಳಿಂದ ಲಾಭವಿರುತ್ತದೆ. ಮಕ್ಕಳ ಬಗ್ಗೆ ಇದ್ದ ನಂಬಿಕೆಗಳು ವ್ಯತ್ಯಾಸವಾಗ ಬಹುದು. ಕೆಲವೊಂದು ವಿಷಯಗಳಲ್ಲಿ ಬಂಧು ಗಳಿಂದ ತೀವ್ರ ರೀತಿಯ ಪ್ರತಿರೋಧ ಬರುತ್ತದೆ. ಸಂಗಾತಿಯ ಉಡಾಫೆ ಮಾತುಗಳು ನಿಮಗೆ ಮುಜುಗರವನ್ನು ಉಂಟು ಮಾಡಬಹುದು. ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿಯನ್ನು ಕಾಣ ಬಹುದು. ಕೆಲವರಿಗೆ ಸಂಗಾತಿ ದೆಸೆಯಿಂದ ವಿದೇಶಯಾನ ಅಥವಾ ದೂರ ಪ್ರಯಾಣ ಒದಗಬಹುದು.ಹೆಚ್ಚಿನ ಒಳಿತಿಗಾಗಿ ಗಣೇಶ ದುರ್ಗೆಯರನ್ನು ಪ್ರಾರ್ಥಿಸಿರಿ.
ತುಲಾ
ಕೆಲವರು ಕುಟುಂಬದವರ ಹೆಸರಿನಲ್ಲಿ ಗೌರವವನ್ನು ಪಡೆದುಕೊಳ್ಳುವರು.ಆದಾಯವು ಕಡಿಮೆ ಇದ್ದರೂ ತೊಂದರೆ ಇರುವುದಿಲ್ಲ. ನಿಮ್ಮ ಕೆಲಸಗಳಿಗೆ ಸಮಾಜದ ಸಹಕಾರ ಸಿಗುವುದು ಕಡಿಮೆ. ಕೃಷಿಯಿಂದ ನಿಮಗೆ ಆದಾಯವಿರು ತ್ತದೆ. ಮಕ್ಕಳಿಂದ ಗೌರವ ಕಡಿಮೆ ಇರುತ್ತದೆ. ರಾಜಕೀಯ ನಾಯಕರುಗಳಿಗೆ ಜನ ಸಮೂಹ ದಿಂದ ಹೆಚ್ಚುಪ್ರಶ್ನೆಗಳು ಬರುತ್ತವೆ.ಚರ್ಮರೋಗ ಗಳು ಕೆಲವರನ್ನು ಬಾಧಿಸಬಹುದು.ಸಂಗಾತಿಯ ವೆಚ್ಚದಲ್ಲಿ ಏರಿಕೆಯಾಗುತ್ತದೆ. ಕೆಲವು ಕ್ರೀಡಾ ಪಟುಗಳು ತಮ್ಮ ಸಾಧನೆಯಿಂದ ಪರಿಚಯಿಸಿ ಕೊಳ್ಳುತ್ತಾರೆ. ಸರ್ಕಾರಿ ಕೆಲಸಕಾರ್ಯಗಳು ಅಂದುಕೊಂಡಂತೆ ಆಗುವುದಿಲ್ಲ. ಹೆಚ್ಚಿನ ಒಳಿತಿ ಗಾಗಿ ಸುಬ್ರಹ್ಮಣ್ಯ ಶನೇಶ್ಚರ ಧ್ಯಾನ ಮಾಡಿರಿ.
ವೃಶ್ಚಿಕ
ಬಂಧುಗಳ ನಡುವೆ ನೀವು ಗುರುತಿಸಲ್ಪಡುವಿರಿ. ಆದಾಯವು ಉತ್ತಮ ವಾಗಿರುತ್ತದೆ. ಸೋದರಿಯರ ಮತ್ತು ಹಿರಿಯ ಮಹಿಳೆಯರ ಸಹಕಾರಗಳು ನಿಮಗೆದೊರೆಯು ತ್ತದೆ.ಕೃಷಿಭೂಮಿಯನ್ನು ಕೊಳ್ಳುವಯೋಗವಿದೆ. ಮಕ್ಕಳಿಂದ ತೀಕ್ಷ್ಣವಾದ ಮಾತುಗಳನ್ನು ಕೇಳಲ್ಪ ಡುವಿರಿ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಸುಧಾ ರಣೆಯನ್ನು ಕಾಣಬಹುದು.ಸಂಗಾತಿ ಮಾಡುವ ಆಹಾರ ಪದಾರ್ಥಗಳ ಮಾರಾಟ ದಿಂದ ಹೆಚ್ಚು ಲಾಭವಿರುತ್ತದೆ.ಗಣಿಗಾರಿಕೆಯನ್ನು ಮಾಡುವವ ರಿಗೆ ಇದ್ದ ಕಾನೂನಿನ ತೊಡಕುಗಳು ಪರಿಹಾರ ವಾಗುತ್ತದೆ. ತಾಯಿ ಸ್ವಲ್ಪ ಮುನಿಸಿಕೊಳ್ಳುವರು. ಹೆಚ್ಚಿನಒಳಿತಿಗಾಗಿ ದುರ್ಗಾ ಮತ್ತು ಗಣೇಶನ ಧ್ಯಾನ ಮಾಡಿರಿ.
ಧನು
ನಡವಳಿಕೆಯಲ್ಲಿ ಗಂಭೀರತೆಯನ್ನು ಪ್ರದರ್ಶನ ಮಾಡುವಿರಿ. ಆದಾಯವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಬರುತ್ತದೆ. ಬಂಧುಗಳ ವರ್ತನೆಯಿಂದ ನೊಂದಿದ್ದರು ಸಹ ಅವರನ್ನು ಕ್ಷಮಿಸಿ ಮುಂದು ವರೆಯುವಿರಿ. ರಾಜಕೀಯ ನಾಯಕರುಗಳಿಗೆ ಜನ ಬೆಂಬಲ ಕಡಿಮೆಯಾ ಗುವ ಸಾಧ್ಯತೆಗಳಿವೆ. ವಿದೇಶದಲ್ಲಿ ಓದಬೇಕೆನ್ನು ವವರಿಗೆ ಅವಕಾಶಗಳು ದೊರೆಯುತ್ತವೆ. ಕ್ರೀಡಾ ಪಟುಗಳು ನಿರೀಕ್ಷಿತ ಸ್ಪರ್ಧೆಗಳಿಂದ ವಂಚಿತರಾ ದರೂ ಸಹ ಉತ್ತಮ ಸ್ಪರ್ಧೆಗೆ ಅವಕಾಶ ದೊರ ಕಿಸಿಕೊಳ್ಳುವರು. ಸಂಗಾತಿ ಮಾಡುವವ್ಯವಹಾರ ಗಳಲ್ಲಿ ನಿಮಗೆ ಹೆಚ್ಚು ಪಾಲು ದೊರೆಯುತ್ತದೆ. ಹೆಚ್ಚಿನ ಒಳಿತಿಗಾಗಿ ದುರ್ಗಾ ಪ್ರಾರ್ಥನೆಯನ್ನು ಮಾಡಿರಿ.
ಮಕರ
ಮನಸ್ಸಿನಲ್ಲಿ ಸಂತೋಷವಿರುತ್ತದೆ. ನೀವು ಮಾಡಿದ ಕೆಲಸಗಳಿಗೆ ಪ್ರತಿಫಲ ದೊರಕುವ ಸಂದರ್ಭ ಬಂದಿದೆ. ಆದಾಯ ಕಡಿಮೆ ಇದ್ದರೂ ಸಹ ನಿರ್ವಹಣೆ ಉತ್ತಮವಾಗಿರುತ್ತದೆ. ನಿಮ್ಮ ಬಂಧುಗಳು ನಿಮ್ಮ ಕಾರ್ಯಗಳಿಗೆ ಅಡ್ಡಿ ಬರ ಬಹುದು. ಕೃಷಿ ವಿಜ್ಞಾನವನ್ನು ಓದುತ್ತಿರುವವ ರಿಗೆ ಹೆಚ್ಚು ಅನುಕೂಲತೆ ದೊರೆಯುತ್ತದೆ. ರಕ್ತ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯು ನಿಮಗೆ ಮನಸಾರ ಸಹಕರಿಸು ವರು.ಭೂಮಿಯನ್ನು ವ್ಯಾಪಾರ ಮಾಡುವವ ರಿಗೆ ಅಭಿವೃದ್ಧಿ ಇರುತ್ತದೆ. ಅನಿರೀಕ್ಷಿತ ಸರ್ಕಾರಿ ಸಹಾಯಗಳು ಒದಗುವ ಸಾಧ್ಯತೆಗಳಿವೆ.ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಮತ್ತು ದುರ್ಗಾ ಪ್ರಾರ್ಥನೆ ಮಾಡಿರಿ.
ಕುಂಭ
ಬಹಳ ತಾಳ್ಮೆಯಿಂದ ಹಿರಿಯರು ಮುಂದುವರೆಯುವರು. ಯುವಕರು ಮಾತನಾ ಡುವಾಗ ಎಚ್ಚರಿಕೆ ಇರಲಿ, ಅವರ ಎಡಬಿಡಂಗಿ ತನದ ಮಾತುಗಳು ಅವರಿಗೆ ಮುಳುವಾಗ ಬಹುದು. ವಿದೇಶಿ ಹಣದ ವ್ಯವಹಾರ ಮಾಡು ವವರಿಗೆ ಸಾಕಷ್ಟು ಲಾಭವಿರುತ್ತದೆ. ಧಾರ್ಮಿಕ ಕೆಲಸಮಾಡುವವರಿಗೆ ಗುರುಗಳ ಆಶೀರ್ವಾದ ವಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮ ಕಾಲ. ಶೀತಬಾಧೆ ತೊಂದರೆ ಇರುವ ವರು ಎಚ್ಚರ ವಹಿಸಿರಿ. ಸಂಗಾತಿಯಕಡೆಯವರ ಬಲದಿಂದ ವೃತ್ತಿಯಲ್ಲಿ ಸ್ಥಿರತೆಯನ್ನು ಕಾಣಬ ಹುದು. ಉದ್ಯೋಗದಲ್ಲಿ ಆಲಸ್ಯ ಖಂಡಿತ ಬೇಡ. ಹೆಚ್ಚಿನ ಒಳಿತಿಗಾಗಿ ಗೌರಿ ಪ್ರಾರ್ಥನೆಯನ್ನು ಮಾಡಿರಿ.
ಮೀನ
ಯಾವುದೇ ವಿಷಯವನ್ನು ಗಲಾಟೆಯತ್ತ ಕೊಂಡಯ್ಯ ಬೇಡಿ, ಇದರಿಂದ ತೀವ್ರ ಮುಖ ಭಂಗ ನಿಮಗೆ ಆಗುವುದು. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಬಂಧುಗಳನ್ನು ಅನುಸರಿಸಿ ನಡೆಯುವುದುನಿಮಗೆಒಳ್ಳೆಯದು. ಭೂಮಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ವಿದ್ಯಾರ್ಥಿಗಳಿಗೆ ಅವರ ನಿರೀಕ್ಷಿತ ಫಲಿತಾಂಶದ ಹತ್ತಿರ ಬರಬಹುದು. ಗುಪ್ತರೋಗ ಅಥವಾ ಶ್ವಾಸಕೋಶದ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯಿಂದ ಕೆಲವು ವಿಷಯಗಳಲ್ಲಿ ಸಹಕಾರ ಸಿಗುವುದಿಲ್ಲ. ಮೇಲಧಿಕಾರಿಗಳಿಂದ ಈಗ ಕಿರುಕುಳಗಳು ಆಗಬಹುದು. ಹೆಚ್ಚಿನ ಒಳಿತಿಗಾಗಿ ಲಕ್ಷ್ಮೀನಾರಾ ಯಣನ ಧ್ಯಾನ ಮಾಡಿರಿ.
ADVERTISEMENT
ADVERTISEMENT