ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
21/07/2024 - 27/07/2024
ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯ ಹಿತಾಸಕ್ತಿಗಳಿಗಾಗಿ ಹಣ ಖರ್ಚಾಗುತ್ತದೆ
Published 27 ಜುಲೈ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವೃತ್ತಿಯಲ್ಲಿ ಆಹ್ಲಾದಕರ ವಾತಾವರಣ ವಿರುತ್ತದೆ. ಬಡ್ತಿ ಸಹ ಸಿಗಬಹುದು. ಉದ್ಯೋಗ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಆದಾಯ ಮಧ್ಯಮ ಗತಿಯಲ್ಲಿ ರುತ್ತದೆ. ಕೆಲವರಿಗೆ ಬೆನ್ನುನೋವು ಕಾಣಿಸಬ ಹುದು. ಮಾನಸಿಕ ಖಿನ್ನತೆ ಕೆಲವರನ್ನು ಕಾಡುತ್ತದೆ. ವೃತ್ತಿಯಲ್ಲಿ ಹೆಚ್ಚು ಅಲೆದಾಟ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ವೃದ್ಧಿ ಇರುತ್ತದೆ. ಆಮದು ಮತ್ತು ರಫ್ತಿನ ವ್ಯಾಪಾರ ಮಾಡುವವ ರಿಗೆ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು.ಸಾಹಸ ಕಲಾವಿದರುಗಳು ಕಲೆಯ ಪ್ರದರ್ಶನವನ್ನು ಮಾಡುವಾಗ ಸ್ವಲ್ಪ ಎಚ್ಚರದಿಂದಿರುವುದು ಒಳ್ಳೆಯದು. ಹಿರಿಯರಿಂದ ಧನ ಸಹಾಯ ದೊರೆಯುತ್ತದೆ.
ವೃಷಭ
ಆದಾಯ ಉತ್ತಮವಾಗಿದ್ದರೂ ಖರ್ಚು ಅಷ್ಟೇ ಇರುತ್ತದೆ. ಬೇರೆ ಬೇರೆ ಮೂಲ ಗಳಿಂದ ಹಣ ಬರುತ್ತದೆ. ಆತ್ಮ ವಿಶ್ವಾಸವನ್ನು ವೃದ್ಧಿಸಿಕೊಳ್ಳುವುದು ಉತ್ತಮ. ಸ್ವಂತವ್ಯಾಪಾರ ಅಥವಾ ಉದ್ಯೋಗ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಕಾರ್ಯಕ್ಷೇತ್ರದಲ್ಲಿ ಸ್ವಲ್ಪ ಅಭಿವೃದ್ಧಿ ಇರುತ್ತದೆ. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಗಳಿವೆ. ಸಂಗಾತಿಯ ಸಲಹೆಗಳು ನಿಮಗೆ ಲಾಭ ತರುತ್ತವೆ. ವಾಹನ ಮಾರಾಟಗಾರರಿಗೆ ಹೆಚ್ಚಿನ ಲಾಭವಿರುತ್ತದೆ. ಪಾಲುದಾರಿಕೆ ವ್ಯವಹಾರಗ ಳಲ್ಲಿ ಹೆಚ್ಚಿನ ಗಮನ ಇರಲಿ.ಲೇವಾದೇವಿ ವ್ಯವಹಾರ ಅಷ್ಟು ಒಳಿತಲ್ಲ. ಆರೋಗ್ಯದ ಬಗ್ಗೆ ನಿಗಾ ಇರಲಿ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಚುರುಕಾಗಿರುವುದು ಬಹಳ ಒಳ್ಳೆಯದು.
ಮಿಥುನ
ಆದಾಯವು ಇರುತ್ತದೆ ಅದಕ್ಕೆ ಮೀರಿದಖರ್ಚು ಇರುತ್ತದೆ. ಶೀಘ್ರ ಕೋಪದಿಂದ ಬಂಧುಗಳ ನಡುವೆ ಭಿನ್ನಾಭಿಪ್ರಾಯವನ್ನು ತಂದುಕೊಳ್ಳುವಿರಿ. ವಾರದಮಧ್ಯದಲ್ಲಿಉಲ್ಲಾಸ ಇದ್ದು ಭಾಗ್ಯೋದಯವಾಗುತ್ತದೆ. ಶತ್ರುಗಳಿಂದ ಕಾಟ ಜಾಸ್ತಿ ಆಗಬಹುದು. ಕುಟುಂಬದ ಸದಸ್ಯ ರಲ್ಲಿ ಅನಾರೋಗ್ಯ ಕಾಣಿಸಬಹುದು. ನಿಮ್ಮ ಸಂಗಾತಿಯ ಹಿತಾಸಕ್ತಿಗಳಿಗಾಗಿ ಹಣ ಖರ್ಚಾ ಗುತ್ತದೆ. ಗಣಿಗಾರಿಕೆ ಮಾಡುವವರಿಗೆ ಹಿನ್ನಡೆ ಇರುತ್ತದೆ. ವ್ಯವಹಾರದಲ್ಲಿ ತಕ್ಷಣದ ಏರಿಳಿತಗ ಳಾಗಬಹುದು. ತಳಿ ಸಂಶೋಧಕರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಉದ್ಯೋಗದಲ್ಲಿ ಹಿತ ಶತ್ರುಗಳು ಹೆಚ್ಚಾಗುವಸಾಧ್ಯತೆ ಇವೆ. ಕೃಷಿಯಿಂದ ಆದಾಯ ಹೆಚ್ಚುತ್ತದೆ.
ಕರ್ಕಾಟಕ
ವೈಯಕ್ತಿಕ ಅಭಿಮಾನದ ಜೊತೆಗೆ ಅಲಂಕಾರಕ್ಕೂ ಗಮನ ಕೊಡುವಿರಿ. ಬಹಳ ಚಾಣಾಕ್ಷತನದಿಂದ ಮಾತನಾಡುವಿರಿ. ನಿಮ್ಮ ನಡವಳಿಕೆಯಲ್ಲಿ ಹೆಚ್ಚು ದೇವರ ಬಗ್ಗೆ ಗಮನ ಹರಿಸುವಿರಿ.ಸರ್ಕಾರಿಸಂಸ್ಥೆಗಳಿಗೆಭೂಮಿಯನ್ನು ಒದಗಿಸುವ ಕೆಲಸ ಮಾಡುವ ಜನರಿಗೆ ಸಾಕಷ್ಟು ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನು ಕೂಲವಿರುತ್ತದೆ, ಅದರಲ್ಲೂ ಕೃಷಿ ವಿದ್ಯಾರ್ಥಿಗ ಳಿಗೆ ಹೆಚ್ಚಿನ ಫಲಿತಾಂಶ ಪಡೆಯುವ ಯೋಗ ವಿದೆ. ಅಜೀರ್ಣ ಅಥವಾ ಅತಿ ಉಷ್ಣದಿಂದ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು. ಸಂಗಾತಿಯ ನಿಷ್ಠುರದ ನಡವಳಿಕೆಗಳು ಬೇಸರ ತರಿಸಬಹುದು. ಸರ್ಕಾರಿ ಸಾಲಗಳು ಸರಾಗ ವಾಗಿ ದೊರೆಯುತ್ತವೆ.
ಸಿಂಹ
ಬಹಳ ಬುದ್ಧಿವಂತಿಕೆಯಿಂದ ನಡೆದು ಕೊಳ್ಳುವಿರಿ.ನಿಮ್ಮ ನಡವಳಿಕೆಗಳಲ್ಲಿ ವ್ಯವಹಾ ರದ ಬಗ್ಗೆ ಹೆಚ್ಚು ಗಮನವಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಕೆಲವೊಂದು ಸಮಯಗಳಲ್ಲಿ ಬಂಧುಗಳು ನಿಮ್ಮ ಸಹಕಾರಕ್ಕೆ ಬರುವರು. ಕೃಷಿ ಯಿಂದ ಹೆಚ್ಚಿನ ಆದಾಯವಿರುತ್ತದೆ . ನಿರೀಕ್ಷಿತ ಭೂಮಿ ಕೊಳ್ಳಲು ಹಣ ಒದಗಿ ಬರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಬರಬ ಹುದು. ಸಂಗಾತಿಯ ನ್ಯಾಯಯುತ ಪ್ರಶ್ನೆಗಳು ನಿಮಗೆ ಮುಜುಗರ ತರಬಹುದು .ಗಣಿಗಾರಿಕೆ ಮಾಡುವವರಿಗೆ ಹಿನ್ನಡೆಯಾಗಹುದು. ವಿದೇಶಿ ವ್ಯವಹಾರ ಮಾಡುತ್ತಿರುವವರಿಗೆ ಅನಿರೀಕ್ಷಿತ ಲಾಭಗಳು ಬರಬಹುದು.
ಕನ್ಯಾ
ಶ್ರೀಮಂತರಂತೆ ಕಾಣಿಸಿಕೊಳ್ಳಲು ಪ್ರಯತ್ನ ಪಡುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಕೃಷಿ ಉತ್ಪನ್ನಗಳಿಂದ ಹೆಚ್ಚು ಆದಾಯ ವಿರುತ್ತದೆ. ಸರ್ಕಾರಿ ಏಜೆಂಟರಗಳಿಗೆ ಆದಾಯ ಹೆಚ್ಚಾಗುವಸಾದ್ಯತೆ ಇದೆ. ಬಂಧುಗಳ ಜೊತೆ ಕಿರಿಕಿರಿ ಮಾಡಿಕೊಳ್ಳುವುದು ಬೇಡ. ಸ್ಥಿರಾಸ್ತಿ ವಿಚಾರದಲ್ಲಿಮುಂದುವರೆಯಬಹುದು. ರಾಜಕಾರಣಿಗಳಿಗೆ ಎದುರಾಳಿಗಳನ್ನು ಮಣಿ ಸುವ ವಿಷಯವೊಂದು ದೊರೆಯುತ್ತದೆ. ಶತ್ರು ಗಳನ್ನು ನಿಗ್ರಹ ಮಾಡಲು ಸಾಕಷ್ಟು ತಂತ್ರಗ ಳನ್ನು ರೂಪಿಸುವಿರಿ. ನಿಮ್ಮ ಸಂಗಾತಿಯ ಕೆಲ ವೊಂದು ಧೋರಣೆಗಳನ್ನು ಖಂಡಿಸುವಿರಿ.
ತುಲಾ
ವಾರದ ಆರಂಭ ಬಹಳ ಸಂತೋಷ ದಾಯಕವಾಗಿರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಗಳಿಂದಲೇ ಹೊಸಶತ್ರುಗಳುಹುಟ್ಟಿಕೊಳ್ಳುವರು.ರಾಜಕೀಯ ಪ್ರವೇಶ ಮಾಡಬೇಕೆನ್ನುವವರಿಗೆ ಅನುಕೂಲ ಕರವಾದ ವಾತಾವರಣ ದೊರೆಯುವ ಸಾಧ್ಯತೆ ಗಳಿವೆ. ಮಕ್ಕಳಿಂದ ನಿರೀಕ್ಷಿತ ಪ್ರಮಾಣದ ಸಹಾಯ ದೊರೆಯುವುದಿಲ್ಲ. ವಿದ್ಯಾರ್ಥಿಗಳು ಹೆಚ್ಚು ಶ್ರಮ ವಹಿಸಿ ಓದಬೇಕು. ಮೂಳೆಯ ತೊಂದರೆಗಳು ಕೆಲವರಿಗೆ ಕಾಣಿಸಬಹುದು. ವಿದೇಶವ್ಯವಹಾರ ಮಾಡುವವರಿಗೆ ಸ್ವಲ್ಪ ಲಾಭ ವಿರುತ್ತದೆ. ಪ್ರೀತಿಪ್ರೇಮಗಳಲ್ಲಿ ಜಯ ವಿರುತ್ತದೆ.
ವೃಶ್ಚಿಕ
ಈ ವಾರ ಗೌರವದ ಜೊತೆಗೆ ಶೌರ್ಯವೂ ನಿಮ್ಮಲ್ಲಿ ಮನೆ ಮಾಡಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಬಹಳ ಶ್ರಮಪಟ್ಟು ಕೆಲಸಮಾಡುವಿರಿ. ಕೃಷಿಯಲ್ಲಿಉತ್ಸಾಹಹೆಚ್ಚಾಗಿ ಅದರಲ್ಲಿ ಹೆಚ್ಚು ಕಾಲ ತೊಡಗಿ ಕೊಳ್ಳುವಿರಿ. ರಾಜಕಾರಣವನ್ನು ವೃತ್ತಿಯಾಗಿ ಮಾಡಿಕೊಳ್ಳಬೇ ಕೆನ್ನುವವರಿಗೆ ಈಗ ಸಂದರ್ಭ ಒದಗಿಬರುತ್ತದೆ. ವಾಯುಯಾನ ವಿಷಯವನ್ನು ಅಭ್ಯಾಸಮಾಡು ತ್ತಿರುವವರಿಗೆ ಉತ್ತಮ ಫಲಿತಾಂಶ ವಿರುತ್ತದೆ. ಶೀತ ಬಾಧೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಗೆ ಆಸ್ತಿ ಸಂಪಾದನೆ ಮಾಡುವ ಯೋಗ ವಿದೆ. ಧರ್ಮದ ಕಾರ್ಯಗಳನ್ನು ಮಾಡುತ್ತಿರುವ ವರಿಗೆ ಆದಾಯ ಹೆಚ್ಚುತ್ತದೆ. ಉದ್ಯೋಗದಲ್ಲಿ ಏರಿಳಿತವಿರುವುದಿಲ್ಲ.
ಧನು
ಇಷ್ಟವಿಲ್ಲದಿದ್ದರೂ ಕೆಲವು ಕಾರ್ಯ ಗಳಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ನಿಮಗಿರುತ್ತದೆ. ಆದಾಯವು ಸಾಮಾನ್ಯ ಗತಿ ಯಲ್ಲಿರುತ್ತದೆ. ಶತ್ರುಗಳು ಹೂಡುವ ತಂತ್ರಗ ಳನ್ನು ಅವರಿಗೆ ತಿರುಗಿಸಬಹುದು. ಹೊರದೇಶ ದಲ್ಲಿರುವವರು ಆಸ್ತಿ ಮಾಡಿಕೊಳ್ಳಬಹುದು. ವಿದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಆದಾಯವಿರುತ್ತದೆ. ವಿದ್ಯಾರ್ಥಿ ಗಳಿಗೆನಿರೀಕ್ಷಿತಪ್ರಮಾಣದಫಲಿತಾಂಶವಿರುತ್ತದೆ. ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯನ್ನು ಕಾಣಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭವಿರುತ್ತದೆ.ನ್ಯಾಯಾಲಯದ ಕೇಸುಗಳಲ್ಲಿ ಜಯಗಳಿಸುವಿರಿ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ.
ಮಕರ
ಶುದ್ಧ ಮನಸ್ಸಿನಿಂದ ಕೆಲಸ ಮಾಡುವಿರಿ. ಆದಾಯ ಸ್ವಲ್ಪ ಕಡಿಮೆ ಇದ್ದರೂ ಸಹ ಹಣ ನಿರ್ವಹಣೆಯನ್ನು ಮಾಡುವಿರಿ. ಯಾವುದೇ ಕೆಲಸಮಾಡಲು ಮುನ್ನುಗ್ಗಿ ಹೋಗುವಿರಿ. ಎಲ್ಲರ ಕಷ್ಟಕ್ಕೆ ಸಹಾಯಹಸ್ತಚಾಚುವಿರಿ.ಆಸ್ತಿಮಾಡುವ ವಿಚಾರದಲ್ಲಿ ಯಶಸ್ಸನ್ನು ಕಾಣಬಹುದು. ಈಗ ಅಧ್ಯಯನ ಮಾಡುವವರಿಗೆ ಉತ್ತಮ ಅವಕಾಶ ಗಳು ದೊರೆಯುತ್ತವೆ. ಮಕ್ಕಳಿಂದ ಸಾಕಷ್ಟು ಗೌರವ ದೊರೆಯುತ್ತದೆ. ವ್ಯವಹಾರಗಳಲ್ಲಿ ಅನಿರೀಕ್ಷಿತ ತಿರುವನ್ನು ಕಾಣಬಹುದು. ರಕ್ತ ಪರಿ ಚಲನೆಯಲ್ಲಿ ವ್ಯತ್ಯಾಸವಿರುವವರು ಚಿಕಿತ್ಸೆ ಯನ್ನು ತೆಗೆದುಕೊಳ್ಳುವುದು ಉತ್ತಮ. ಸರ್ಕಾರಿ ಕೆಲಸಗಳಲ್ಲಿ ಸಂಗಾತಿ ಕಡೆಯವರಿಂದಸಹಾಯ ದೊರೆಯುತ್ತದೆ.
ಕುಂಭ
ಹಿರಿಯರ ಶಾಂತ ಚಿತ್ತತೆ ಎಲ್ಲರ ಗಮನ ಸೆಳೆಯುತ್ತದೆ. ಯುವಕರ ಒರಟು ಮಾತುಗಳು ಅವರಿಗೆ ತೊಂದರೆ ತರಬಹುದು. ಕೆಲಸಗಳನ್ನು ಶ್ರದ್ಧೆಯಿಂದ ಮಾಡುವುದು ಅತಿ ಒಳ್ಳೆಯದು. ವಿದೇಶದಲ್ಲಿ ಕೆಲಸಮಾಡುತ್ತಿರುವ ವರಿಗೆ ಈಗ ಆದಾಯ ಹೆಚ್ಚುತ್ತದೆ. ಇಚ್ಛೆಪಟ್ಟ ಆಸ್ತಿಯನ್ನು ಈಗ ಕೊಳ್ಳಬಹುದು. ವಿದ್ಯಾರ್ಥಿ ಗಳಿಗೆ ಬೇಕಾಗಿದ್ದ ಸವಲತ್ತುಗಳು ದೊರೆಯು ತ್ತವೆ. ಕಣ್ಣಿನ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯ ವ್ಯಾಪಾರ ವ್ಯವಹಾರ ಗಳಲ್ಲಿ ಲಾಭ ಹೆಚ್ಚುತ್ತದೆ. ಕೃಷಿ ಸಂಬಂಧಿತ ಬೀಜೋತ್ಪಾದನೆ ಮಾಡುವವರಿಗೆ ಬೇಡಿಕೆ ಇರುತ್ತದೆ. ಹೊಸದಾಗಿ ರಾಜಕೀಯ ಪ್ರವೇಶ ಮಾಡುತ್ತಿರುವವರಿಗೆ ಅವಕಾಶಗಳು ದೊರೆಯುತ್ತವೆ.
ಮೀನ
ನಿಮ್ಮಲ್ಲಿ ತಾಳ್ಮೆ ಕಡಿಮೆ ಇರುತ್ತದೆ. ಮಾತಿನಲ್ಲಿ ಜಾಣ್ಮೆಯಿಂದ ಕೆಲಸ ತೆಗಿಯುವಿರಿ. ಆದಾಯವು ನಿರೀಕ್ಷೆಯ ಮಟ್ಟಕ್ಕಿರುತ್ತದೆ. ಬಂಧುಗಳ ಮನೆಯ ಧರ್ಮಕಾರ್ಯಗಳಲ್ಲಿ ಭಾಗವಹಿಸುವಿರಿ. ಆಸ್ತಿ ವಿಚಾರದಲ್ಲಿ ಹೆಚ್ಚಿನ ಆತುರ ಬೇಡ. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ಇರುತ್ತದೆ.ಚರ್ಮವ್ಯಾದಿಗಳಿರುವವರು ಮತ್ತು ಉಸಿರಾಟದ ತೊಂದರೆ ಇರುವವರು ಎಚ್ಚರ ವಹಿಸಿರಿ. ಪೂಜಾ ಸಂಭಂದಿತ ವಸ್ತುಗ ಳನ್ನು ಮಾರಾಟ ಮಾಡುವುದರಿಂದ ಲಾಭವಿರು ತ್ತದೆ. ರೇಷ್ಮೆ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿನ ನಿಮ್ಮ ಅನು ಭವವನ್ನು ಪರೀಕ್ಷಿಸುವ ಕಾಲ ಬರಬಹುದು.
ADVERTISEMENT
ADVERTISEMENT