ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ 5–1 ಗೋಲುಗಳಿಂದ ಮಣಿಪುರ ತಂಡವನ್ನು ಮಣಿಸಿತು. ಕರ್ನಾಟಕದ ಪರ ಸಕೀಪ್ (8ನೇ, 27ನೇ ಮತ್ತು 65ನೇ ನಿಮಿಷ) ಮೂರು ಗೋಲು ಗಳಿಸಿ ಮಿಂಚಿದರು. ರಿಶಾನ್ ಚೌಧರಿ (44ನೇ) ಮತ್ತು ಅರವಿಂದ್ರಿಯನ್ ಸಂವಾಂಕಿ ಲಾಟೊ (85ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಮಣಿಪುರ ಪರ ಏಕೈಕ ಗೋಲನ್ನು ಖುತೀಫಂ ಮುಕ್ತಾರ್ ರೆಹಮಾನ್ (34ನೇ) ದಾಖಲಿಸಿದರು. ಟೂರ್ನಿಯಲ್ಲಿ ಒಟ್ಟು 14 ತಂಡಗಳು ಸೆಣಸಾಟ ನಡೆಸಿದವು.