ಬೆಂಗಳೂರು: ಹನುಮಂತನಗರದಲ್ಲಿ ರೌಡಿಗಳ ಸಹಚರರ ಮಧ್ಯೆ ಮಾರಾಮಾರಿ ನಡೆದಿದೆ.
ಸೆ.22ರಂದು ಗುಡ್ಡೆ ಭರತ ಹಾಗೂ ಸೈಕಲ್ ರವಿ ಸಹಚರರ ಮಧ್ಯೆ ಹನುಮಂತನಗರ ವ್ಯಾಪ್ತಿಯಲ್ಲಿ ಗಲಾಟೆ ನಡೆದಿದೆ . ರೌಡಿಗಳು ಲಾಂಗ್, ಕ್ರಿಕೆಟ್ ಬ್ಯಾಟ್ ಹಿಡಿದು ಹೊಡೆದಾಡಿಕೊಂಡಿ ದ್ದಾರೆ. ರೌಡಿಗಳ ಹೊಡೆದಾಟದ ದೃಶ್ಯ ಬಡಾವಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯಾವ ಕಾರಣಕ್ಕೆ ಹೊಡೆದಾಟ ನಡೆದಿದೆ ಎಂಬುದು ಗೊತ್ತಾಗಿಲ್ಲ.
ಸಿಸಿಟಿವಿ ದೃಶ್ಯ ಆಧರಿಸಿ ಹನುಮಂತ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ
ನಡೆಸುತ್ತಿದ್ದಾರೆ.