ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ನ 2024–25ನೇ ಸಾಲಿನ ಅವಧಿಗೆ ಅಧ್ಯಕ್ಷರಾಗಿ ಆರ್. ಶ್ರೀಧರ ಅವರು ಪುನರಾಯ್ಕೆಯಾಗಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಮೋಹನ್ಕುಮಾರ್ ಬಿ.ಎನ್ (ಉಪಾಧ್ಯಕ್ಷ), ಶಿವಕುಮಾರ್ ಎಂ.ಡಿ. ಬೆಳ್ಳಿತಟ್ಟೆ (ಪ್ರಧಾನ ಕಾರ್ಯದರ್ಶಿ), ಮಂಜುನಾಥ್ ಜಿ.ವೈ (ಕಾರ್ಯದರ್ಶಿ), ಧರಣೀಶ್ ಬಿ.ಎನ್ (ಜಂಟಿ ಕಾರ್ಯದರ್ಶಿ), ಗಣೇಶ್ ಜಿ (ಖಜಾಂಚಿ) ಪದಾಧಿಕಾರಿಗಳಾಗಿ ಆಯ್ಕೆ ಆಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೋಹಿಣಿ ಅಡಿಗ, ಸಿ.ಆರ್. ಮಂಜುನಾಥ್, ಮುಮ್ತಾಜ್ ಅಲೀಂ, ಯಾಸಿರ್ ಮುಶ್ತಾಕ್, ಶರಣಬಸಪ್ಪ ಎ.ಎಚ್., ಶಿವಣ್ಣ ಹಾಗೂ ಮಿನಿ ತೇಜಸ್ವಿ ಆಯ್ಕೆಯಾಗಿದ್ದಾರೆ ಎಂದು ಪ್ರೆಸ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.