ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು: ಮಹಿಳೆಯ ಯಾಮಾರಿಸಿ ಸರಗಳ್ಳತನ

Published : 11 ಸೆಪ್ಟೆಂಬರ್ 2024, 14:26 IST
Last Updated : 11 ಸೆಪ್ಟೆಂಬರ್ 2024, 14:26 IST
ಫಾಲೋ ಮಾಡಿ
Comments

ಗೌರಿಬಿದನೂರು: ತಾಲ್ಲೂಕಿನ ಹೊಸೂರು ಹೋಬಳಿಯ ಕೋಟಾಲದಿಣ್ಣೆ ಸೇತುವೆ ಬಳಿ ಹೊಸೂರು ಗ್ರಾಮದ ಗಂಗಲಕ್ಷ್ಮಮ್ಮ (55) ಕೂಲಿ ಕೆಲಸಕ್ಕೆ ಬುಧವಾರ ಬೆಳಗ್ಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಸರ ಅಪಹರಿಸಿದ್ದಾರೆ.

ಅಪರಿಚಿತರು, ‘ನಾನು ಸಬ್‌ ಇನ್‌ಸ್ಪೆಕ್ಟರ್. ಈ ರೀತಿ ಬಂಗಾರದ ಒಡವೆ ಧರಿಸಿ ಓಡಾಡಿದರೆ ಕಳ್ಳತನ ಮಾಡುತ್ತಾರೆ. ಅದನ್ನು ಬಿಚ್ಚಿ ಪೇಪರ್‌ನಲ್ಲಿ ಹಾಕಿ’ ಎಂದು ತಿಳಿಸಿದ್ದಾರೆ. ಅವರನ್ನು ನಂಬಿ ₹1.65 ಲಕ್ಷ ಬೆಲೆ ಬಾಳುವ, 38 ಗ್ರಾಂ ಚಿನ್ನದ ಸರವನ್ನು ಅವರಿಗೆ ನೀಡಿದ್ದಾರೆ. ಅವರು ಕಲ್ಲುಗಳಿರುವ ಪೇಪರನ್ನು ನೀಡಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT