ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಕುರಿತು ಮಾಹಿತಿ ನೀಡಿದ ಅವರು, ‘ಕಾರ್ಯಕ್ರಮದಲ್ಲಿ ಎ.ಜೆ ಸಮೂಹ ಸಂಸ್ಥೆಗಳ ಎ.ಜೆ. ಶೆಟ್ಟಿ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಭಾರತ್ ಅಕಾಡೆಮಿ ಟ್ರಸ್ಟಿ ಡಾ.ವಿಂಧ್ಯಾ ಪೈ, ಬೆಸೆಂಟ್ ಸಮೂಹ ಸಂಸ್ಥೆಯ ಅಧ್ಯಕ್ಷ ಮಣೆಲಾ ಅಣ್ಣಪ್ಪ ನಾಯಕ್ ಭಾಗವಹಿಸುವರು. ಶಿಕ್ಷಣ ಸಂಸ್ಥೆಗಳ ಕಲಿಕೆಯ ಪರಿಸರ ಸುಧಾರಣೆ, ಸುಗಮ ಆಡಳಿತ, ಮತ್ತು ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿಸುವ ಮೂಲಕ ಕಂಪನಿ ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು ನೆರವಾಗಲಿದೆ' ಎಂದರು.