ದಸರಾ ಉತ್ಸವವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ, ನವರಾತ್ರಿ ಹಬ್ಬ ಆಚರಣೆಗೆ ಸೀಮಿತವಾಗದಿರಲಿ. ಹೆಣ್ಣುಮಕ್ಕಳಿಗೆ ರಕ್ಷಣೆ ಜತೆಗೆ ಅವರ ಹಕ್ಕುಳ ರಕ್ಷಣೆಯೂ ಆಗಬೇಕು. ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಂಡು ಸಂಭ್ರಮಿಸಿದಾಗ ದಸರಾ ಉತ್ಸವಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದರು.