ವಿಜಯೋತ್ಸವದಲ್ಲಿ ಕಾಂಗ್ರೆಸ್ನ ನೂರಾರು ಯುವಕರು ಪಕ್ಷದ ಬೃಹತ್ ಗಾತ್ರದ ಧ್ವಜ ಹಿಡಿದು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು. ಕಾಂಗ್ರೆಸ್ ಪಕ್ಷಕ್ಕೆ ಜಯಕಾರ ಹಾಕುವ ಮೂಲಕ ಸಂಭ್ರಮಿಸಿದರು.
ಪುರಸಭೆಯ ಮಾಜಿ ಸದಸ್ಯ ಎಚ್.ಡಿ.ವಿಜೇಂದ್ರಪ್ಪ, ರಾಜು ಸರಳಿನಮನೆ, ಪುರಸಭೆ ಸದಸ್ಯರಾದ ರಾಜೇಂದ್ರ, ತನ್ವೀರ್ ಅಹ್ಮದ್, ಎಚ್.ಕಡದಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜೇಶ್, ಮಾಜಿ ಉಪಾಧ್ಯಕ್ಷ ಮಾದಪ್ಪ, ಯುವ ಕಾಂಗ್ರೆಸ್ ಮುಖಂಡ ಎಚ್.ಎಸ್.ರಂಜಿತ್, ರಾಜು, ಮಂಜಪ್ಪ, ದ್ಯಾಮಜ್ಜಿ ಗಿರೀಶ್, ಚಮನ್ ಸಾಬ್, ವಿಜಯಗೌಡ, ಗಿರೀಶ್ ಕುಂಬಾರ್ ಸೇರಿ ನೂರಾರು ಜನರು ಭಾಗವಹಿಸಿದ್ದರು.