ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಬುರಾವ ಶಾಸ್ತ್ರಿ, ‘ಶ್ರೀಮಠವು ಬಡ ವಿದ್ಯಾರ್ಥಿಗಳಿಗೆ ಅನೇಕ ದಶಕಗಳಿಂದ ಉಚಿತ ಅನ್ನ–ಜ್ಞಾನ ಎರಡೂ ದಾಸೋಹ ನೀಡುತ್ತ ಬರುತ್ತಿದೆ. ಈ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ. ಬಡ ಮಕ್ಕಳಿಗೆ ಅನ್ನ–ಜ್ಞಾನ ಎರಡೂ ದಾಸೋಹದ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಮಠವಾಗಿದೆ’ ಎಂದರು.