ರಾಜೇಶ್ ಮೈಸೂರು– ಹುಣಸೂರು ರಸ್ತೆಯ ಪಕ್ಕದ ರಾಘವೇಂದ್ರ ಬಾರ್ ಮತ್ತು ರೆಸ್ಟೋರೆಂಟ್ ಮುಂಭಾಗ ವಿಶ್ವನಾಥ್ ಎಂಬುವರು ಮದ್ಯ ತೆಗೆದುಕೊಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಓಡಿಸಿಕೊಂಡು ಹೋಗಿ ಬಲಗಣ್ಣು, ಮೂಗಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದರು. ಇಲವಾಲ ಠಾಣೆಯ ಅಂದಿನ ಎಸ್ಐ ಕೆ.ಎನ್.ಸುರೇಶ್ ಬೋಪಣ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.