ಮುಡಾದ ಹಿಂದಿನ ಕಾರ್ಯದರ್ಶಿಗಳಾದ ಸವಿತಾ, ಕುಸುಮಾಕುಮಾರಿ, ವೆಂಕಟರಾಜು, ಶೇಖರ್, ವಿಶೇಷ ಭೂಸ್ವಾಧೀನ ಅಧಿಕಾರಿಗಳಾಗಿದ್ದ ಚಂದ್ರಮ್ಮ, ಹರ್ಷವರ್ಧನ್, ವಿಷ್ಣುವರ್ಧನ್ ಹಾಗೂ ವಿವಿಧ ದರ್ಜೆಯ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಸೆ. 9ರಂದು ನೋಟಿಸ್ ನೀಡಿದ್ದಾರೆ. ಆ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಕೈಗೊಂಡ ಕ್ರಮಗಳ ಮಾಹಿತಿ ಸಮೇತ, ನೋಟಿಸ್ ನೀಡಿದ ದಿನಾಂಕದಿಂದ ಮೂರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.